ಗುರುವಾದಡೂ ಬಸವಣ್ಣನಿಲ್ಲದೇ ಗುರುವಿಲ್ಲ ಲಿಂಗವಾದಡೂ ಬಸವಣ್ಣನಿಲ್ಲದೇ ಲಿಂಗವಿಲ್ಲ ಜಂಗಮವಾದಡೂ ಬಸವಣ್ಣನಿಲ್ಲದೇ ಜಂಗಮವಿಲ್ಲ ಪ್ರಸಾದವಾದಡೂ ಬಸವಣ್ಣನಿಲ್ಲದೇ ಪ್ರಸಾದವಿಲ್ಲ ಅನುಭವವಾದಡೂ ಬಸವಣ್ಣನಿಲ್ಲದೇ ನುಡಿಯಲಾಗದು ಇಂತು ಸಂಗಿಸುವಲ್ಲಿ, ನಿಜ ಸಂಗಿಸುವಲ್ಲಿ ಸುಸಂಗಿಸುವಲ್ಲಿ, ಮಹಾಸಂಗಿಸುವಲ್ಲಿ ಪ್ರಸಾದ ಸಂಗಿಸುವಲ್ಲಿ ಕಲಿದೇವಾ ನಿಮ್ಮ ಶರಣ ಬಸವಣ್ಣನ ನಿಲುವು. ಸರ್ವ ಸಮಾನತೆ ಲೋಕ ಕಲ್ಯಾಣ ಮತ್ತು ವೈಜಾರಿಕ ಸಮಾಜದ ಕರ್ತಾರ, ಮಹಾಮನೆಯ ಒಡೆಯ ಬಸವಣ್ಣನವರ ವ್ಯಕ್ತಿತ್ವ ದರ್ಶನವನ್ನು ತಮ್ಮ ವಚನದಲ್ಲಿ ಕಟ್ಟಿಕೊಟ್ಟಿರುವ ಮಹಾ ಶರಣ ಮಡಿವಾಳ ಮಾಚೀದೇವರ ಕೊಡುಗೆ ಅಮೋಘವಾಗಿದೆ. …
Read More »