Home / featured / ಬಯಲಾದ ಕನ್ನಡ ನಾಡಿನ ಬಯಲಾಟದ ಕೊಂಡಿ

ಬಯಲಾದ ಕನ್ನಡ ನಾಡಿನ ಬಯಲಾಟದ ಕೊಂಡಿ

ಲಿಂಗಾಯತ ಕ್ರಾಂತಿ: ಜಾನಪದ ಹಾಡುಗಾರಿಕೆಯ ಕಲಾವಂತಿಕೆಯಲ್ಲಿ ಕಳೆದ ಐದು ದಶಕಗಳ ಕಾಲ ಜನಪದರ, ವಿದ್ವಾಂಸರ, ನಗರವಾಸಿಗಳ ಮನಗಳಿಗೆ ಲಗ್ಗೆಯಿಟ್ಟು ಅವರೆಲ್ಲರ ತಲೆದೂಗಿಸಿದ ಹಾಡುಗಾರ ಬಸಲಿಂಗಯ್ಯ ಸಂಗಯ್ಯ ಹಿರೇಮಠ. ಜಾನಪದ ಸಂಗೀತ ಕ್ಷೇತ್ರದಲ್ಲಿ ಸಮಕಾಲೀನ ಬಹುತೇಕ ಹಾಡುಗಾರರಿಂದ ಮನ್ನಣೆ ಪಡೆದ ಅದೃಷ್ಟವಂತರಿವರು. ಹಾರ್ಮೋನಿಯಂನ ಕೀಲಿಮಣೆಗಳ ಮೇಲೆ ಅವರ ಬೆರಳುಗಳು ಚಕಚಕನೆ ಓಡುತ್ತಿದ್ದರೆ ಕಂಠಸಿರಿಯಿಂದ ಹಾಡಿನ ಓಘ ಜಲಪಾತದಂತೆ ಧುಮುಕುತಿತ್ತು. ಬೆರಳುಗಳು ಹಾಗೂ ತುಟಿಗಳ ಚಲನೆಗಳು ಒಂದಕ್ಕೊಂದು ಪೈಪೋಟಿ ನಡೆಸುತ್ತಿದ್ದವು. ಆದರೆ ಹಾಡು ಮುಗಿಯುವ ಸಂದರ್ಭದಲ್ಲಿ ಅವೆರಡು ಮಂದಸ್ಥರದಲ್ಲಿ ಬೆಸದುಕೊಂಡು ಹಾಡು ಮುಗಿಯುತಿತ್ತು. ಕೇಳುಗರ ಭಾವನೆಗಳು ತುಂಬಿಬರುತ್ತಿದ್ದವು.

ಶಾಸ್ತ್ರೀಯವಲ್ಲದ ಜಾನಪದೀಯ ಕಲಾವಂತಿಕೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಮುಟ್ಟಿಸಿರುವ ಮೇರುಕಲಾವಿದ ಬಸಲಿಂಗರ ಹಾಡುಗಾರಿಕೆಯ ಗತ್ತು ಮನೆತನದ ಹಿರಿಯರಿಂದಲೇ ಬಂದಿತ್ತು. ಅಪ್ಪ ಸಂಗಯ್ಯ, ಅವ್ವ ಈರಮ್ಮ, ಅಣ್ಣ ಗಂಗಯ್ಯ, ಸಹೋದರಿಯರಾದ ಪಾರಕ್ಕ, ಸುಶೀಲವ್ವ ಹಾಗೂ ಅತ್ತೆ ಜಯದೇವಿತಾಯಿ ಇವರೆಲ್ಲರ ಸಾಂಗತ್ಯದಲ್ಲಿ ಅದು ಹಂತ ಹಂತವಾಗಿ ಬೆಳೆಯುತ್ತಾ ಸಾಗಿತ್ತು. ಮುಂದೆ ಮನಮೆಚ್ಚಿದ ಮಡದಿ ವಿಶ್ವೇಶ್ವರಿಯವರ ಬೆಂಬಲ ಹಾಗೂ ಲವಲವಿಕೆಗಳು ಕನ್ನಡ ನಾಡಿನ ಜನಪದರ ಸಾಂಸ್ಕೃತಿಕ ರಂಗಕ್ಕೆ ಇನ್ನಿಲ್ಲದ ಮೆರಗನ್ನು ಕೊಟ್ಟಿತು. ಒಂದು ಸಾರಿ ಕೈಗಾ ಅಣುಶಕ್ತಿ ಕೇಂದ್ರದಲ್ಲಿ ಜರುಗಿದ ವಿಶಿಷ್ಟ ಸಮಾರಂಭದಲ್ಲಿ ಅವರ ಜಾನಪದ ಸಂಶೋಧನಾ ಕೇಂದ್ರದಿಂದ ಪ್ರಸ್ತುತಿಗೊಂಡ ಕರ್ನಾಟಕ ಗ್ರಾಮೀಣ ಸೊಗಡಿನ ರೂಪಕ ಹಾಗೂ ಹಾಡುಗಾರಿಕೆಗಳು ವಿದೇಶಗಳಿಂದ ಬಂದಂತಹ ಐವತ್ತಕ್ಕೂ ಹೆಚ್ಚಿನ ಅಣು ವಿಜ್ಞಾನಿಗಳನ್ನು ರೋಮಾಂಚನಗೊಳಿಸಿ ನಾಡಿನ ಭವ್ಯ ಗ್ರಾಮೀಣ ಸಂಸ್ಕೃತಿಯನ್ನು ಅನಾವರಣಗೊಳಿಸಿ, ಸಂಘಟಕರಿಗೆ ತಮ್ಮ ನಾಡಿನ ಪರಂಪರೆಯ ಸೊಬಗನ್ನು ವಿದೇಶಿಯರಿಗೆ ತೋರಿಸಿದ ಸಂತೃಪ್ತಿ ತಂದಿತ್ತು.

ಕಿತ್ತೂರು ಚೆನ್ನಮ್ಮನ ನಾಡಿನ ಅಪ್ಷಟ ಜನಪದ ಪ್ರತಿಭೆಯೊಂದು ‘ನಿನಾಸಂ’ ಸೇರಿ ಅಲ್ಲಿ ರಂಗಭೂಮಿಯ ಖ್ಯಾತ ರಂಗ ನಿರ್ದೇಶಕರುಗಳಾದ ಬಿ.ವಿ.ಕಾರಂತ, ಗೋಪಾಲ ವಾಜಪೇಯಿ, ಚಿದಂಬರ ಜಂಬೆ ಹಾಗೂ ಕೆ ವಿ ಸುಬ್ಬಣ್ಣನವರ ಗರಡಿಯಲ್ಲಿ ಪಳಗಿ ವೃತ್ತಿ ರಂಗಭೂಮಿಯ ಬಿಗಿಯಾದ ಪಟ್ಟುಗಳನ್ನು ಕಲಿತು, ಬಯಲಾಟದ ಮುಖ್ಯ ಭೂಮಿಕೆಯ ಸಣ್ಣಾಟ , ದೊಡ್ಡಾಟಗಳಲ್ಲೂ ನಿರಂತರ ಅನ್ವೇಷಣೆಗಳನ್ನು ನಡೆಸಿತು. ಪಾರಂಪರಿಕ ಹಾಗೂ ಸೃಜನಶೀಲತೆಗಳನ್ನು ಮೇಳೈಸಿ ಹೊಸ ಹೊಸ ಪ್ರಯೋಗಗಳನ್ನು ರಂಗಸ್ಥಳದಲ್ಲಿ ಅವರು ತಂದರು. ಕನ್ನಡ ನಾಡಿನ ಸಂಶೋಧಕ ಎಂ ಎಂ ಕಲಬುರ್ಗಿಯವರ ಪರಿಕಲ್ಪನೆಯ ‘ಖರೆ ಖರೆ ಸಂಗ್ಯಾಬಾಳ್ಯಾ’ ಮರುಸೃಷ್ಟಿಯ ನಾಟಕವನ್ನು ಧೈರ್ಯದಿಂದ ರಂಗಕ್ಕಿಳಿಸಿದ ಧೀರತನ ಇವರಲ್ಲಿತ್ತು.

ಸಂಬಂಧದಲ್ಲಿ ನನಗೆ ಅಣ್ಣನಾಗಿದ್ದ ಬಸಲಿಂಗರಿಗೆ ನಾನು ಆರೋಗ್ಯದ ಕುರಿತು ಕಾಳಜಿವಹಿಸಲು ಅನೇಕ ಸಂದರ್ಭದಲ್ಲಿ ಹೇಳಿದ್ದೆ. ಅವರಲ್ಲಿದ್ದ ಅಪಾರ ಪ್ರತಿಭೆ ಜನಪದರ ಸಂಸ್ಕೃತಿಯನ್ನು ಚಿಲುಮೆಯ ಧಾರೆಯಂತೆ ಜಿನುಗಿಸುವ ಶಕ್ತಿಯದಾಗಿತ್ತು. ಇಂತಹ ಅಪರೂಪದ ಚಿಲುಮೆಯ ಧಾರೆ ಬಹುಬೇಗ ಬತ್ತದಿರಲಿ ಎನ್ನುವ ನನ್ನ ಬಯಕೆ ಇಂದು ಮುದುಡಿದೆ.
ಶಿಶುವಿನಹಾಳ ಶರೀಪರ ಪದಗಳನ್ನು ರಸಭಂಗ ತರದೆ ಅರ್ಥಪೂರ್ಣವಾಗಿ ಹಾಡುವ ಹೆಗ್ಗಳಿಕೆ ಇವರಿಗಲ್ಲದೆ ನಾಡಿನಲ್ಲಿ ಬೇರೆಯಾರಿಗೂ ಇರಲಿಲ್ಲ. ಜನಪದರು, ತತ್ವಪದಕಾರರು, ದಾಸರು ಯಾವ ಹಮ್ಮಿಲ್ಲದೆ ಪದಗಳನ್ನು ಸಂದರ್ಭಕ್ಕನುಸಾರವಾಗಿ ಹಾಡುತ್ತಿದ್ದ ಪರಂಪರೆಯ ಬಸಲಿಂಗಯ್ಯ ತೊಟ್ಟಿಲು, ಸೋಬಾನೆ, ಮದುವೆ ಕಾರ್ಯಕ್ರಮಗಳಲ್ಲಿ ಮುಗ್ದಭಾವದಿಂದ ಹಾಡುತ್ತಿದ್ದರು. ಸಾವಿನ ಸಂದರ್ಭಗಳಲ್ಲಿ ಹಾಡುತ್ತಿದ್ದ ಶೋಕಗೀತೆಗಳು ಅಂತ್ಯಕ್ರಿಯೆಗೆ ಬಂದವರಲ್ಲಿ ಕಲ್ಲು ಮನಸ್ಸಿವರೇನಾದರು ಇದ್ದರೂ ಅವನ್ನೂ ಕರಗಿಸುತ್ತಿದ್ದವು. ಅವರಿಂದು ಹೊರಟಿದ್ದಾರೆ ಮರಳಿ ಬಾರದ ಬಯಲಿಗೆ. ಇಡೀ ಜನಪದವೇ ಶೋಕ ಆಚರಿಸುತ್ತಿದ್ದೆ ಧ್ವನಿಗಳನ್ನು ಮಡುಗಟ್ಟಿಸಿಕೊಂಡು.

ಮಹಾಂತೇಶ ಕೈಗಾ🌱

About nagaraj

Check Also

ಕಿತ್ತೂರು ಚೆನ್ನಮ್ಮನ ಜ್ಯೋತಿಯಾತ್ರೆಯ ವೇಳಾಪಟ್ಟಿ

ಚನ್ನಮ್ಮನ ಕಿತ್ತೂರು : ಕಿತ್ತೂರು ಉತ್ಸವದ ಅಂಗವಾಗಿ ರಾಣಿ ಚನ್ನಮ್ಮ ವಿಜಯ ಜ್ಯೋತಿ‌ ಯಾತ್ರೆಯು ಅಕ್ಟೋಬರ್ 18 ರಿಂದ ಅಕ್ಟೋಬರ್ …

ವೈದ್ದಿಕರ ಕುತಂತ್ರದಿಂದ ಲಿಂಗಾಯತ ಧರ್ಮದ ಹೋರಾಟಕ್ಕೆ ಹಿನ್ನಡೆ

ಲಿಂಗಾಯತ ಕ್ರಾಂತಿ: ಲಿಂಗಾಯತ ಧರ್ಮ ಉದಯವಾಗಿದ್ದು 12 ಶತಮಾನದ ಆರಂಭದಲ್ಲಿ ಎಂಬುವುದು ಜಗತ್ತಿನ ಶ್ರೇಷ್ಠ ತತ್ವಜ್ಞಾನಿ, ಸಮಾನತೆಯ ಪ್ರತಿಪಾಧಕ, ಲಿಂಗಬೇದವನ್ನು …

ಡಾ. ಎಂ.ಬಿ ಪಾಟೀಲ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಲಿ

ನೇಗಿನಹಾಳ : ನಾಡಿನ ನೆಲ, ಜಲ, ಶಿಕ್ಷಣ ಹಾಗೂ ಜನಸಾಮಾನ್ಯರ ಜೀವನೋಪಾಯಕ್ಕಾಗಿ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ವಿಜಯಪುರ ಜಿಲ್ಲೆಯ ಬೆಳಕಾಗಿರುವ …

ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿ ಶ್ರೀ ಡಾ. ಎಂ.ಬಿ ಪಾಟೀಲರ ಜನ್ಮದಿನ

ಲಿಂಗಾಯತ ಕ್ರಾಂತಿ: ಲಿಂಗಾಯತರ ಪ್ರಶ್ನಾತೀತ ನಾಯಕ, ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿಗಳು, ನೇರ ನಡೆ-ನುಡಿಯ ಲಿಂಗಾಯತ ಕ್ರಾಂತಿ ಪತ್ರಿಕೆಯ ಮಾರ್ಗದರ್ಶಕರಾದ ಸನ್ಮಾನ್ಯಶ್ರೀ …

ಹಸಿರುಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಶ್ರೀ ಕಲ್ಯಾಣರಾವ್ ಜಿ ಮುಚಳಂಬಿ ಲಿಂಗೈಕ್ಯ

ಬೆಳಗಾವಿ: ರೈತ ಚಳವಳಿಗಳಿಗಳ ಮುಂಚೂಣಿ ನಾಯಕ, ಹಸಿರು ಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಲ್ಯಾಣರಾವ್ ಗುರಬಸಪ್ಪ ಮುಚಳಂಬಿಯವರು ಅವರು ಬೆಳಗಾವಿ …

ನೂತನ ಸಂಸತ್ ಭವನಕ್ಕೆ ಅನುಭವ ಮಂಟಪ ಎಂದು ಹೆಸರಿಡಲು ನಿಜಗುಣಾನಂದ ಸ್ವಾಮೀಜಿ ಒತ್ತಾಯ

ಬೈಲೂರು: ದೆಹಲಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸಂಸತ್ ಭವನಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡಬೇಕು ಎಂದು ಬೈಲೂರು ನಿಷ್ಕಲ ಮಂಟಪದ …

ಅಕ್ಟೋಬರ್ 3ರಂದು “ಶಿವಬಸವ ಕಾರುಣ್ಯ” ದ ಗುರು ಪ್ರವೇಶ

ಲಿಂಗಾಯತ ಕ್ರಾಂತಿ: ಉತ್ತರಕನ್ನಡ ಜಿಲ್ಲೆ ಹಳಿಯಾಳದ ಅಂಗಡಿ ಕುಟುಂಬದ ನೂತನ ಮನೆ “ಶಿವಬಸವ ಗುರುಕಾರುಣ್ಯ” ದ ಗುರು ಪ್ರವೇಶವು ಅಕ್ಟೋಬರ್ …

ಅಕ್ಕನ ಸಮರ್ಪಣಾ ಭಾವ

ಭಾರತೀಯ ಭಕ್ತಿ ಸಾಹಿತ್ಯದ ಚರಿತ್ರೆಯಲ್ಲಿ ಅಕ್ಕಮಹಾದೇವಿ ಒಬ್ಬ ವಿಶಿಷ್ಟ ಸಾಧಕಿ, ಯೋಗಿಣಿಯಾಗಿ ಕಂಡುಬರುತ್ತಾಳೆ. ಆಕೆಯ ಪ್ರೀತಿ ಪ್ರೇಮ ವಿನೂತನ ವಿಸ್ಮಯದ …

ಪ್ರಭು ಚನ್ನಬಸವ ಸ್ವಾಮೀಜಿ ವಿರಚಿತ ಮಹಾತ್ಮರ ಚರಿತಾಮೃತ ಗ್ರಂಥ ಲೋಕಾರ್ಪಣೆ

ಬೆಂಗಳೂರು: ಬೆಳಗಾವಿ ಜಿಲ್ಲೆಯ ಅಥಣಿಯ ಶ್ರೀ ಮೋಟಗಿ ಮಠ ಬೆಂಗಳೂರಿನಲ್ಲಿ ಆಯೋಜಿಸಿದ್ದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ (ಅಥಣೀಶ) ವಿರಚಿತ …

ರಂಭಾಪುರಿ ಶ್ರೀಗಳು ಢೋಂಗಿತನ ಬಿಡಲಿ

ತಮ್ಮ ಸ್ವಾರ್ಥಕ್ಕೆ ಪಂಚಪೀಠಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿರುವ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಬೇರೆಯವರನ್ನು …

“ವೇದಕ್ಕೆ ಒರೆಯ ಕಟ್ಟುವೆ” – ಕೃತಿ ಲೋಕಾರ್ಪಣೆ

ಲಿಂಗಾಯತರಿಗೆ ಲಿಂಗಾಯತ ಧರ್ಮದ ಇತಿಹಾಸವೇ ಗೊತ್ತಿಲ್ಲದಿರುವುದು ದೊಡ್ಡ ದುರಂತ ಲಿಂಗಾಯತ ಧರ್ಮೀಯರು ವೈದಿಕ ಆಚರಣೆಯ ಸೆಳೆತಕ್ಕೆ ಸಿಲುಕಿಕೊಂಡಿದ್ದಾರೆ. ಡಾ.ಜೆ.ಎಸ್.ಪಾಟೀಲರ ” …

“ಲಿಂಗಾನಂದರ ವಚನಧರ್ಮ ಚಳುವಳಿಗೆ” ಡಾಕ್ಟರೇಟ್ ಪದವಿ

ಲಿಂಗಾಯತ ಕ್ರಾಂತಿ : ಸುಮಾರು 50 ವರ್ಷಗಳಾಚೆಯ ನೈಜ ಬಸವತತ್ವ ಪ್ರಸಾರ, ಶರಣಧರ್ಮದ ವೈಚಾರಿಕ ಚಿಂತನೆಗಳನ್ನು ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ …

“ಅವಕಾಶ ವಂಚಿತರಿಗೆ ಬೆಳಕಾದ ಸಜ್ಜನ ರಾಜಕಾರಣಿ ಸಿದ್ದಪ್ಪ ಕಂಬಳಿಯವರು”

ರಾಜಕೀಯ ಇತಿಹಾಸದಲ್ಲಿ ಮೈಲಿಗಲ್ಲು ಸಾಧಿಸಿದ ಕರ್ನಾಟಕ ಮಹಾಪುರುಷ ಶರಣ ಸಿದ್ದಪ್ಪ ಕಂಬಳಿಯವರು. ಶಾಲಾ ಕಾಲೇಜುಗಳ ತೊರೆದು ಕೋರ್ಟ್ ಕಛೇರಿ ಬಹಿಷ್ಕಾರ …

ಸೆಪ್ಟೆಂಬರ್ 25ರಂದು ಮಹಾತ್ಮರ ಚರಿತಾಮೃತ ಗ್ರಂಥ ಬಿಡುಗಡೆ: ಪೂಜ್ಯ ನಿಜಗುಣಾನಂದ ಶ್ರೀಗಳು

ಬೆಳಗಾವಿ: ಭಾರತ ಬಹುತ್ವದ ಭಾರತಕ್ಕೆ ಧಾರ್ಮಿಕ ಗ್ರಂಥವಾಗಿ ಮಹಾತ್ಮರ ಚರಿತಾಮೃತ ಅಥಣಿಯ ಪ್ರಭು ಚನ್ನಬಸವ ಸ್ವಾಮೀಜಿ ಗ್ರಂಥ ರಚಿಸಿದ್ದಾರೆ ಎಂದು …

“ನೊಬೆಲ್” ಎಂಬ ಮನುಕುಲದ ದ್ರುವತಾರೆ…🌟

ನೂರು ವರ್ಷಗಳ ಹಿಂದೆ ಒಬ್ಬ ಉದ್ಯಮಿ ಬೆಳಗಿನ ಕಾಫ಼ಿ ಸೇವಿಸುತ್ತ ಅಂದಿನ ದಿನಪತ್ರಿಕೆಯೊಂದನ್ನ ಕೈಗೆತ್ತಿಕೊಂಡು ಓದಲು ಪ್ರಾರಂಭಿಸುತ್ತಾನೆ. ಅದರಲ್ಲಿನ ಒಂದು …

Leave a Reply

Your email address will not be published.