ಲಿಂಗಾಯತ ಕ್ರಾಂತಿ: ಲಿಂಗಾಯತ ಧರ್ಮ ಉದಯವಾಗಿದ್ದು 12 ಶತಮಾನದ ಆರಂಭದಲ್ಲಿ ಎಂಬುವುದು ಜಗತ್ತಿನ ಶ್ರೇಷ್ಠ ತತ್ವಜ್ಞಾನಿ, ಸಮಾನತೆಯ ಪ್ರತಿಪಾಧಕ, ಲಿಂಗಬೇದವನ್ನು ಮೆಟ್ಟಿನಿಂತ ಮೊಟ್ಟಮೊದಲ ಗುರು ಬಸವಣ್ಣನವರ ಹಾಗೂ ಸಮಕಾಲೀನ ಶರಣರ ವಚನಗಳಿಂದ ತಿಳಿದುಬರುತ್ತದೆ.
ಮೌಡ್ಯದ ಅಂದಾನುಕರಣೆ ತುಂಬಿ ತುಳುಕುತ್ತಿದ್ದ ಕಾಲಮಾನದಲ್ಲಿ ಸರಳ ಹಾಗೂ ವೈಚಾರಿಕತೆಯ ಪಥದತ್ತ ಸಾಗಲು ದಾರಿ ತೋರಿಸಿದ ಮಹಾಮಾನವತಾವಾದಿ ಗುರು ಬಸವಣ್ಣನವರು ಸನಾತನ ವೈದಿಕ ಧರ್ಮದಿಂದ ಹೊರಬಂದು ಲಿಂಗಾಯತ ಧರ್ಮ ಸ್ಥಾಪಿಸಿದರು.
ಇದರಿಂದ ಗುರು ಬಸವಣ್ಣನವರ ವೈದ್ಧಿಕ ಸನಾತನಿಗಳ ಕೆಂಗಣ್ಣಿಗೆ ಗುರಿಯಾಗಿ ಕುತಂತ್ರದಿಂದ ಕಲ್ಯಾಣ ತೇಜಿಸಿ ಕೂಡಲಸಂಗಮದಲ್ಲಿ ಲಿಂಗದಲ್ಲಿ ಲೀನವಾದರು.
ಅವರು ಕಾಲವಾದ ನಂತರ ಬಸವಣ್ಣನವರ ಅನುಯಾಯಿಗಳನ್ನು ಕಂಡಲ್ಲಿ ಕೊಲ್ಲುವುದು, ವಚನ ಸಾಹಿತ್ಯ ಸುಡುವುದು ಆರಂಭವಾಯಿತು. ವಚನ ಸಾಹಿತ್ಯ ರಕ್ಷಣೆಗಾಗಿ ದಟ್ಟವಾದ ಅರಣ್ಯ, ಗುಡ್ಡಗಾಡು ಪ್ರದೇಶದಲ್ಲಿ ಬಂದು ನೆಲೆಸಿದರು. ನಂತರ ಶತಮಾನಗಳು ಕಳೆದಂತೆ ಜಗತ್ತಿನಾದ್ಯಂತ ಬಸವತತ್ವ, ಲಿಂಗಾಯತ ಧರ್ಮ ಪ್ರಚಾರ ಪಡೆಯಲಾರಂಭಿಸಿತು.
17 ಮತ್ತು 18 ನೆಯ ಶತಮಾನದಲ್ಲಿ ಪ್ರಾಚೀನ ಸನಾತನ ವೀರಶೈವ ವೈದ್ಧಿಕರು ಬಸವಣ್ಣನವರ ತತ್ವಗಳಿಗೆ ಮಾರುಹೋಗಿ ಲಿಂಗಾಯತ ಧರ್ಮದಲ್ಲಿ ಬಂದು ಸೇರಿಕೊಂಡರು ಅವರು ಶಿವಲಿಂಗ ಪೂಜೆಯ ಜೊತೆಗೆ ಇಷ್ಟಲಿಂಗ ಪೂಜೆಯನ್ನು ಮಾಡಲಾರಂಭಿಸಿದರು. ಇದರಿಂದ ಲಿಂಗಾಯತ ಪದ ಬಳಕೆ ಕಡಿಮೆಯಾಗುತ್ತಾ ಸನಾತನ ವೈದ್ಧಿಕ ವೀರಶೈವ ಪದದ ಬಳಕೆ ಹೆಚ್ಚಾಗ ತೊಡಗಿತು. ಆಗ ಲಿಂಗಾಯತ ಧರ್ಮ ಪದವು ಗೌನವಾಗತೋಡಗಿ ತು.
19 ನೆಯ ಶತಮಾನದಲ್ಲಿ ಹುಟ್ಟಿಕೊಂಡ ವೀರಶೈವ ಮಹಾಸಭೆ, ವಾರದ ಮಲ್ಲಪ್ಪನವರ ಲಿಂಗಿಬ್ರಾಹ್ಮಣ ಹೋರಾಟ, ಮೈಸೂರು ಅರಸರಿಂದ ಲಿಂಗಾಯತ ಮಠಾಧೀಶರ ಸಾಮೂಹಿಕ ಹತ್ಯ, ಮಠ-ಮಾನ್ಯಗಳು ಲಿಂಗಾಯತ ಪದಬಳಕೆ ಬಿಟ್ಟು ವೀರಶೈವ ಪದಬಳಕೆ ಆರಂಭಿದರಿಂದ ಲಿಂಗಾಯತ ಧರ್ಮದ ವಚನ ಸಾಹಿತ್ಯದ ತತ್ವ – ಸಿದ್ಧಾಂತಗಳು, ಸಂಸ್ಕಾರ ಸಂಸ್ಕೃತಿ, ಆಚಾರ-ವಿಚಾರಗಳು ಸ್ಪಷ್ಟವಾಗಿ ಜನರಿಗೆ ಮುಟ್ಟದೆ ಕಲಬೇರಿಕೆಯ ರೂಪತಾಳಿದ್ದರ ಫಲವಾಗಿ ಲಿಂಗಾಯತ ಧರ್ಮ ಇಂದಿಗೂ ಸ್ವತಂತ್ರ ಧರ್ಮವಾಗಲೂ ಹಲವಾರು ಅಡಕುಗಳನ್ನು ಹೊಂದಿಕೊಂಡಿದೆ.
ಲಿಂಗಾಯತ ಧರ್ಮದ ಪುನರುಜ್ಜೀವನ ಕಾಲ ಎಂದರೆ 20 ನೆಯ ಶತಮಾನ ಅದು ಫ.ಗು ಹಳಕಟ್ಟಿ, ಹರ್ಡೆಕರ ಮಂಜಪ್ಪ, ರೇ. ಉತ್ತಂಗಿ ಚನ್ನಬಸಪ್ಪ, ಲಿಂಗಾನಂದ ಮಹಾಸ್ವಾಮಿಗಳಿಂದ ವಚನ ಸಂಶೋಧನೆ, ಲಿಂಗಾಯತ ಧರ್ಮ ಪ್ರವಚನ ಕಾರ್ಯ ಆರಂಭವಾಯಿತು.
ನಂತರದ ದಿನಮಾನಗಳಲ್ಲಿ ನೂರಾರು ಜನ ಮಠಾಧೀಶರು ಪ್ರವಚನ ಕಾರ್ಯಗಳನ್ನು ಆರಂಭಿಸಿದರು. ಲಿಂಗಾಯತ ಧರ್ಮದ ಕುರಿತು ಸ್ಪಷ್ಟವಾಗಿ ಮಾತನಾಡಲಾರಂಭಿಸಿದರು.
ಸುಮಾರು 1940 ರಲ್ಲಿ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಹೋರಾಟ ಆರಂಭವಾಯಿತು ಆದರೆ ಭಾರತದ ಸ್ವಾತಂತ್ರ್ಯ ಹೋರಾಟವೇ ಮುಖ್ಯವೆಂದು ಅಂದು ಹೋರಾಟವನ್ನು ಕೈಬಿಟ್ಟರು. ಇತ್ತೀಚಿಗೆ ಪೂಜ್ಯ ಮಾತೆ ಮಹಾದೇವಿ ಅವರು ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಆರಂಭಿಸಿದರು.
ಬೀದರ ನಗರದಲ್ಲಿ ಮೊಟ್ಟಮೊದಲಿಗೆ ಆರಂಭವಾದ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದಲ್ಲಿ ಪೂಜ್ಯ ಮಾತಾಜಿ , ಪೂಜ್ಯ ಡಾ ಬಸವಲಿಂಗ ಪಟ್ಟದ್ದೆವರು, ಅಕ್ಕ ಅನ್ನಪೂರ್ಣಾ, ಅಕ್ಕ ಗಂಗಾಭಿಕಾ, ಬೆಲ್ದಾಳ ಶರಣರು ಸೇರಿದಂತೆ ನಾಡಿನ ಅನೇಕ ಪೂಜ್ಯರು ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಬೀದರ ಸಂಸದರಾದ ಭಗವಂತ ಖೂಬಾ, ಜೆ.ಡಿ.ಎಸ್ ಪಕ್ಷದ ಬಸವ ಕಲ್ಯಾಣ ಶಾಸಕರಾದ ಮಲ್ಲಿಕಾರ್ಜುನ ಖೂಬಾ, ಮಕ್ಕಳ ಪಕ್ಷದ ಶಾಸಕ ಅಶೋಕ ಖೇಣಿ, ಶಾಸಕ ಅಜಯಸಿಂಗ್ ಸೇರಿದಂತೆ ಎಲ್ಲ ಪಕ್ಷದ ನೂರಾರು ಮುಖಂಡರು ಈ ಹೋರಾಟದಲ್ಲಿ ಭಾಗಿಯಾಗಿದ್ದರು. ಈ ಹೋರಾಟದಿಂದ ಲಿಂಗಾಯತ ಸಮಾಜ ಎಚ್ಚರವಾಗಿ ಎಲ್ಲ ಕಡೆ ಹೋರಾಟ ಆರಂಭಿಸಿದರೆ ಒಂದು ಕಡೆ ವೀರಶೈವ ಮಹಾಸಭೆಗೆ ದೊಡ್ಡ ಸವಾಲಾಗಿ ಪರಿಣಮಿಸಿತು ಇನ್ನೊಂದು ಕಡೆ ವೈದ್ಧಿಕ ಸನಾತನವಾದಿಗಳಿಗೆ ನುಂಗಲಾರದ ತುತ್ತಾಯಿತು. ನಂತರ ಬೆಳಗಾವಿಯಲ್ಲಿ ನಡೆಯುವ ಸಮಾವೇಶಕ್ಕೆ ಬಿಜೆಪಿ ಹೈಕಮಾಂಡ್, ಪಂಚಪೀಠದ ಸ್ವಾಮಿಗಳು, ಹಾಗೂ ಆರ್.ಎಸ್.ಎಸ್ ನಾಯಕರು ಬಿಜೆಪಿ ಪಕ್ಷದವರಿಗೆ ಲಿಂಗಾಯತ ಹೋರಾಟದಿಂದ ದೂರಸರಿಯುವಂತೆ ಸ್ಪಷ್ಟವಾಗಿ ಹೇಳಿದರು. ಕೆಲವು ಲಿಂಗಾಯತರೇ ಪಕ್ಷದ ಹಿತಕಾಯಲು, ಟಿಕೇಟ್ ಪಡೆಯಲು, ವಿಶ್ವಾಸ ಕಾಯಲು ಹಾಗೂ ಶಾಸಕರಾಗಲು, ಲಿಂಗಾಯತ ಧರ್ಮದ ವಿರುದ್ಧ ಮಾತನಾಡಲಾರಂಭಿಸಿದರು. ಇದರಿಂದ ಅಲ್ಲಿ ಆರಂಭವಾದ ವಿರೋಧ ಲಿಂಗಾಯತ ಧರ್ಮದ ಸಿಪಾರಸ್ಸು ಆಗುವವರೆಗೆ ಮಂದೆವರೆಯಿತು. ಇದರಿಂದ ಲಿಂಗಾಯತ ಧರ್ಮದ ಹೋರಾಟಗಾರರ ವಿರುದ್ಧ ಬಹುದೊಡ್ಡ ಪಡೆಯೇ ನಿರ್ಮಾಣವಾಗಿ ಲಿಂಗಾಯತ ಧರ್ಮದ ಪರವಾಗಿದ್ದ ಸಚಿವ ಶಾಸಕರನ್ನು ಸೋಲಿಸುವ ಕುತಂತ್ರಕ್ಕೆ ಕೈಹಾಕಿದರು. ಇಂದಿಗೂ ಲಿಂಗಾಯತ ಧರ್ಮದ ಹೋರಾಟವನ್ನು ಹತ್ತಿಕ್ಕಲು ಶತಪ್ರಯತ್ನ ನಡೆಯುತ್ತಲೇ ಇದೆ. ಇದಕ್ಕೆ ಕೊನೆ ಯಾವಾಗ ಎಂಬುವುದು ಕಾಯ್ದು ನೋಡ ಬೇಕಾಗಿದೆ.