Home / featured / “ವೇದಕ್ಕೆ ಒರೆಯ ಕಟ್ಟುವೆ” – ಕೃತಿ ಲೋಕಾರ್ಪಣೆ

“ವೇದಕ್ಕೆ ಒರೆಯ ಕಟ್ಟುವೆ” – ಕೃತಿ ಲೋಕಾರ್ಪಣೆ

ಲಿಂಗಾಯತರಿಗೆ ಲಿಂಗಾಯತ ಧರ್ಮದ ಇತಿಹಾಸವೇ ಗೊತ್ತಿಲ್ಲದಿರುವುದು ದೊಡ್ಡ ದುರಂತ

ಲಿಂಗಾಯತ ಧರ್ಮೀಯರು ವೈದಿಕ ಆಚರಣೆಯ ಸೆಳೆತಕ್ಕೆ ಸಿಲುಕಿಕೊಂಡಿದ್ದಾರೆ.

ಡಾ.ಜೆ.ಎಸ್.ಪಾಟೀಲರ ” ವೇದಕ್ಕೆ ಒರೆಯ ಕಟ್ಟುವೆ ” ಹಾಗೂ ಶಿವಣ್ಣ ಗುಡಗುಂಟಿ ಶರಣರ ” ಶರಣಧರ್ಮ ಪ್ರವಚನ ಮಾದರಿ 01 ” ಕೃತಿಗಳು ಲೋಕಾರ್ಪಣೆ ಕಾರ್ಯಕ್ರಮ.

ಬಹುತೇಕ ಲಿಂಗಾಯತರಿಗೆ ಲಿಂಗಾಯತ ಧರ್ಮದ ಇತಿಹಾಸ, ಪರಂಪರೆ ಗೊತ್ತಿಲ್ಲದಿರುವುದು ದೊಡ್ಡ ದುರಂತ. ವೈದಿಕರು ಹೇಳಿದ್ದೇ ಶಾಸ್ತ್ರ ಎಂದು ಅಂದುಕೊಂಡು ಲಿಂಗಾಯತರು ಸಹ ಹೋಮ, ಯಜ್ಞ, ತುಳಸಿ ಪೂಜೆಯಂತಹ ಗೊಡ್ಡು ವೈದಿಕ ಆಚರಣೆಗಳನ್ನು ಮಾಡುತ್ತಿದ್ದು, ಬಸವಣ್ಣನವರ ಆಶಯಗಳನ್ನೇ ಮರೆತು ಹೋಗಿದ್ದಾರೆ ಎಂದು ಕವಿ, ಶಿಕ್ಷಕ ಮಲ್ಲಿಕಾರ್ಜುನ ತಾಳಿಕೋಟಿ ಕಳವಳ ವ್ಯಕ್ತಪಡಿಸಿದರು.

ನಗರದ ಜ. ತೋಂಟದಾರ್ಯ ಮಠದಲ್ಲಿ 20 ಸೆಪ್ಟಂಬರ್ 2021ರಂದು ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಡೆದ 2555ನೇ ಶಿವಾನುಭವ ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕ,ಬಸವತತ್ವನಿಷ್ಠರಾದ ವಿಜಯಪುರದ ಡಾ.ಜೆ.ಎಸ್‌. ಪಾಟೀಲರ ‘ವೇದಕ್ಕೆ ಒರೆಯ ಕಟ್ಟುವೆ’ (ಅನುಭವ ಸಾಹಿತ್ಯ ಗ್ರಂಥಮಾಲೆ, ಬೈಲೂರು) ಹಾಗೂ ಶರಣನಿಷ್ಠರಾದ ಶಿವಣ್ಣ ಗುಡಗುಂಟಿಯವರ ಶರಣ ಧರ್ಮ ಪ್ರವಚನ-ಮಾದರಿ 01 (ಶ್ರೀಗುರು ಬಸವಣ್ಣನವರ ಅನುಭವ ಮಂಟಪ,ಹಿರೇಮುರಾಳ) ಕೃತಿಗಳ ಲೋಕಾರ್ಪಣೆ ಹಾಗೂ ಸಂಮಾನ ಕಾರ್ಯಕ್ರಮದಲ್ಲಿ ಅವರು ಗ್ರಂಥ ಸಮೀಕ್ಷೆ ಮಾಡಿ ಮಾತನಾಡಿದರು.

ವೈದಿಕತ್ವಕ್ಕೆ ಪ್ರತಿದ್ವಂದ್ವಿಯಾಗಿ ಉದಯಿಸಿ ಬಂದಿರುವ ಧರ್ಮವೇ ಲಿಂಗಾಯತ ಧರ್ಮ. ಇದೀಗ ಲಿಂಗಾಯತ ಧರ್ಮೀಯರು ವೈದಿಕ ಆಚರಣೆಯ ಸೆಳೆತಕ್ಕೆ ಸಿಕ್ಕಿ ಹಾಕಿಕೊಂಡು ನಲಗುತ್ತಿದ್ದಾರೆ. ಇಂತ ವೇದ ಪ್ರೇರಿತ, ಮನು ಪ್ರೇರಿತ ಪ್ರತಿಗಾಮಿ ವಿಚಾರಗಳಿಂದ ಲಿಂಗಾಯತರನ್ನು ಎಚ್ಚರಿಸಿ ಅವರಿಗೆ ಸ್ಪಷ್ಟ ವೈಚಾರಿಕ ಅರಿವು ಮೂಡಿಸುವ ಕೆಲಸವನ್ನು ಡಾ.ಜೆ.ಎಸ್.ಪಾಟೀಲ್ ಅವರು ಸಂವಾದ ರೂಪದ ಈ ಕೃತಿಯಲ್ಲಿ ಮಾಡಿದ್ದಾರೆ.ಔಷಧ ವಿಜ್ಞಾನದ ಬೋಧಕರಾಗಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತರಾಗಿರುವ ಜೆ.ಎಸ್. ಪಾಟೀಲರು ಜನರಲ್ಲಿ ವೈಚಾರಿಕ ಜಾಗೃತಿ ಮೂಡಿಸುತ್ತಾ ಸಮಾಜಕ್ಕಂಟಿದ ವ್ಯಾಧಿಯನ್ನು ಗುಣಪಡಿಸುವ ಕಾರ್ಯವನ್ನು ಚಿಕಿತ್ಸಕ ಬುದ್ಧಿಯಿಂದ ಮಾಡುತ್ತಿದ್ದಾರೆ ಎಂದರು.

ವಚನಗಳ ಸಂಗ್ರಹ, ವ್ಯಾಖ್ಯಾನ ಕುರಿತ ಕೃತಿಗಳು ಕನ್ನಡ ಸಾಹಿತ್ಯದಲ್ಲಿ ಸಾಕಷ್ಟಿವೆ ಆದರೆ ಲಿಂಗಾಯತ ಧರ್ಮ ವೈದಿಕ ಧರ್ಮಕ್ಕಿಂತ ಹೇಗೆ ಭಿನ್ನ ಎಂದು ಸಂವಾದ ರೂಪದಲ್ಲಿ ವೈಚಾರಿಕ ತಿಳಿವಳಿಕೆಯೊಂದಿಗೆ ಜಾಗೃತಿ ಮೂಡಿಸುವ ಒಂದು ಮೌಲಿಕ ಕೃತಿ ಇದಾಗಿದೆ. ಪ್ರಗತಿಶೀಲ ಚಳವಳಿಗಳನ್ನು ಹತ್ತಿಕ್ಕುತ್ತಿರುವ ಪ್ರತಿಗಾಮಿ ಶಕ್ತಿಗಳನ್ನು ಎದುರಿಸಲು ಬೇಕಾಗುವ ವೈಚಾರಿಕತೆಯನ್ನು ಈ ಕೃತಿ ಕೊಡುತ್ತದೆ.

-ಮಲ್ಲಿಕಾರ್ಜುನ ತಾಳಿಕೋಟಿ

ಸಾನಿಧ್ಯವಹಿಸಿ ಮಾತನಾಡಿದ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮವು ವೈದಿಕ ಆಚಾರ,ವಿಚಾರಗಳಿಂದ ಹೊರಬರಬೇಕು.ಮನುಷ್ಯ ಕುಲವನ್ನು ಯಾವುದೇ ಬೇಧಭಾವ ಇಲ್ಲದೆ ಪ್ರೀತಿಸುವ ಅವರ ಆಶಯವನ್ನು ನಾವು ಜೀವಂತವಾಗಿಡಬೇಕು. ಪ್ರಜಾಪ್ರಭುತ್ವದ ನೆಲೆಯಲ್ಲಿ ಹುಟ್ಟಿದ ಲಿಂಗಾಯತ ಧರ್ಮದ ನೆರಳಿನಲ್ಲಿ ನಾವು ಮಾನವೀಯತೆಯ ಅಸ್ಮಿತೆಗಳನ್ನು ಹುಡುಕಬೇಕು ಎಂದರು.

ಶರಣ ಸಂಸ್ಕ್ರತಿಯ ಜೀವಾಳ ಕಾಯಕ. ಕಾಯಕದ ಜೀವಾಳ ದಾಸೋಹ.ಶರಣರು ಕಾಯಕವನ್ನು ದಾಸೋಹಕ್ಕಾಗಿ ಮಾಡುತ್ತಿದ್ದರು. ಸಂಸ್ಕೃತಿಯನ್ನು ಮಾನವೀಯಕರಣಗೊಳಿಸುವ ಕಾರ್ಯ ಮಾಡಿದರು.

ನಮ್ಮ ನೆಲಮೂಲದ ಯುವಜನರನ್ನು ವಿಷವರ್ತುಲದ ಹುಸಿರಾಷ್ಟ್ರೀಯತೆಯ ಪ್ರಪಾತಕ್ಕೆ ಕೆಡವಲಾಗಿದೆ.ಅದರಿಂದ ಅವರನ್ನು ಹೊರತರುವ ಕಾರ್ಯ ಆಗಬೇಕಾಗಿದೆ.ಯಾವ ರಾಷ್ಟ್ರೀಯತೆಗೆ ಎಲ್ಲ ಜನಾಂಗ,ಧರ್ಮದವರನ್ನು ಒಪ್ಪಿಕೊಳ್ಳುವ,ಅಪ್ಪಿಕೊಳ್ಳುವ ಶಕ್ತಿಯಿಲ್ಲವೋ ಅಂಥ ರಾಷ್ಟ್ರೀಯ ವಾದವನ್ನು ನಾವು ಒಪ್ಪಿಕೊಳ್ಳುವ ಅವಶ್ಯಕತೆಯೇ ಇಲ್ಲ.ಸಕಲ ಜೀವಾತ್ಮರ ಲೇಸು ಬಯಸುವ ಲಿಂಗಾಯತ,ಬಸವ ಧರ್ಮ ನಿಜ ರಾಷ್ಟ್ರೀಯತೆ ಬಿತ್ತುವ ಧರ್ಮವಾಗಿದೆ.ನೆಲಮೂಲ ಸಮುದಾಯದ ಯುವಕರು ಬಹುದೊಡ್ಡ ಅಪಾಯ ತಂದೊಡ್ಡುತ್ತಿರುವ ಹಿಂದುತ್ವದ ಹುಸಿ ರಾಷ್ಟ್ರೀಯವಾದವನ್ನು ತಿರಸ್ಕರಿಸುವ ಅರಿವು ಮೂಡಿಸಿಕೊಳ್ಳಬೇಕು.

– ಡಾ.ಜೆ.ಎಸ್.ಪಾಟೀಲ ಲೇಖಕರು,ವಿಜಯಪುರ

ಲೇಖಕರಾದ ಶಿವಣ್ಣ ಗುಡಗುಂಟಿ ಶರಣರು ಮಾತನಾಡಿದರು.

ಈ ವೇಳೆ ಗಜೇಂದ್ರಗಡದವರಾದ, ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸಮೀರ ಎ.ರೋಣದ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಸ್ಥಾನ ಪಡೆದ ಕಿರಣ ಈ.ತಾಳಿಕೋಟಿ, ದಾಸೋಹ ಸೇವೆಗೈದ ರೈತ ಹೋರಾಟಗಾರ ಕೂಡ್ಲೆಪ್ಪ ಗುಡಿಮನಿಯವರ ಧರ್ಮ ಪತ್ನಿ ಶಾರದಮ್ಮ ಹಾಗೂ ಉದಯರವಿ ಗುಡಿಮನಿ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕುಮಾರಿ ಸೌಮ್ಯ ಚುಳಕಿ ವಚನ ಚಿಂತನ, ಕುಮಾರಿ ನಂದಿನಿ ಪಾರ್ವತಿಮಠ ಧರ್ಮಗ್ರಂಥ ಪಠಣ ಮಾಡಿದರು. ಗುರುನಾಥ ಸುತಾರ ಹಾಗೂ ಸಂಗಡಿಗರು ವಚನ ಸಂಗೀತ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ದಾನಯ್ಯ ಗಣಾಚಾರಿ, ಮುರುಘರಾಜೇಂದ್ರ ಬಡ್ನಿ, ರತ್ನಕ್ಕ ಪಾಟೀಲ, ವೀರೇಶ ಬುಳ್ಳಾ, ಸೋಮು ಪುರಾಣಿಕ, ಮಲ್ಲಿಕಾರ್ಜುನ ಖಂಡೆಮ್ಮನವರ, ಶಿವಬಸಪ್ಪ ಯಂಡಿಗೇರಿ, ಅಶೋಕ ಬರಗುಂಡಿ, ಶೇಖಣ್ಣ ಕವಳಿಕಾಯಿ, ಗೌರಕ್ಕ ಬಡಿಗಣ್ಣವರ, ಪ್ರತಿಭಾ ಪಾಟೀಲ, ಪಾರ್ವತೆವ್ವ ತಾಳಿಕೋಟಿ, ಅಬ್ದುಲರೆಹಮಾನ್ ಬಿದರಕುಂದಿ, ಮಲ್ಲಿಕಾರ್ಜುನ ಹಡಪದ, ರವೀಂದ್ರ ಹೊನವಾಡ, ಕಲ್ಲಿಗನೂರ ಪುಂಡಲೀಕ, ಎನ್.ಎಂ.ಪವಾಡಿಗೌಡ್ರ, ಪ್ರಕಾಶ ಅಸುಂಡಿ, ಮಂಜುನಾಥ ಅಸುಂಡಿ, ಗುರುಲಿಂಗಯ್ಯ ಓದಸುಮಠ, ಕೆ.ಎಸ್.ಸಾಲಿಮಠ, ಮುತ್ತು ಬಿಳಿಯಲಿ, ಎ.ಆರ್.ರೋಣದ, ವೀರಪ್ಪ ತಾಳದವರ, ಬಸವರಾಜ ಮಂತೂರ, ಮಹಾಂತೇಶ ಕಡಗದ,ಮಂಜು ಹೂಗಾರ, ಇಸ್ಮಾಯಿಲ್ ಯಲಿಗಾರ ಸೇರಿದಂತೆ ನೂರಾರು ಬಸವಾಭಿಮಾನಿಗಳು ಉಪಸ್ಥಿತರಿದ್ದರು. ನಿರೂಪಣೆಯನ್ನು ವಿವೇಕಾನಂದಗೌಡ ಪಾಟೀಲ ಮಾಡಿದರು.

ವರದಿ : ರವೀಂದ್ರ ಹೊನವಾಡ

About nagaraj

Check Also

20 ನೇ ಕಲ್ಯಾಣ ಪರ್ವ ಕ್ಷಣಗಣನೆ ಆರಂಭ

ಲೇಖಕರು – ಸಂಗಮೇಶ ಎನ್ ಜವಾದಿ. ಪತ್ರಕರ್ತ, ಪ್ರಗತಿಪರ ಚಿಂತಕರು. ಬೀದರ ಜಿಲ್ಲೆ. ವಿಶ್ವ ಗುರು ಬಸವಣ್ಣನವರ ನೇತೃತ್ವದಲ್ಲಿ ಅಂದು …

ಕಿತ್ತೂರು ಚೆನ್ನಮ್ಮನ ಜ್ಯೋತಿಯಾತ್ರೆಯ ವೇಳಾಪಟ್ಟಿ

ಚನ್ನಮ್ಮನ ಕಿತ್ತೂರು : ಕಿತ್ತೂರು ಉತ್ಸವದ ಅಂಗವಾಗಿ ರಾಣಿ ಚನ್ನಮ್ಮ ವಿಜಯ ಜ್ಯೋತಿ‌ ಯಾತ್ರೆಯು ಅಕ್ಟೋಬರ್ 18 ರಿಂದ ಅಕ್ಟೋಬರ್ …

ವೈದ್ದಿಕರ ಕುತಂತ್ರದಿಂದ ಲಿಂಗಾಯತ ಧರ್ಮದ ಹೋರಾಟಕ್ಕೆ ಹಿನ್ನಡೆ

ಲಿಂಗಾಯತ ಕ್ರಾಂತಿ: ಲಿಂಗಾಯತ ಧರ್ಮ ಉದಯವಾಗಿದ್ದು 12 ಶತಮಾನದ ಆರಂಭದಲ್ಲಿ ಎಂಬುವುದು ಜಗತ್ತಿನ ಶ್ರೇಷ್ಠ ತತ್ವಜ್ಞಾನಿ, ಸಮಾನತೆಯ ಪ್ರತಿಪಾಧಕ, ಲಿಂಗಬೇದವನ್ನು …

ಡಾ. ಎಂ.ಬಿ ಪಾಟೀಲ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಲಿ

ನೇಗಿನಹಾಳ : ನಾಡಿನ ನೆಲ, ಜಲ, ಶಿಕ್ಷಣ ಹಾಗೂ ಜನಸಾಮಾನ್ಯರ ಜೀವನೋಪಾಯಕ್ಕಾಗಿ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ವಿಜಯಪುರ ಜಿಲ್ಲೆಯ ಬೆಳಕಾಗಿರುವ …

ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿ ಶ್ರೀ ಡಾ. ಎಂ.ಬಿ ಪಾಟೀಲರ ಜನ್ಮದಿನ

ಲಿಂಗಾಯತ ಕ್ರಾಂತಿ: ಲಿಂಗಾಯತರ ಪ್ರಶ್ನಾತೀತ ನಾಯಕ, ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿಗಳು, ನೇರ ನಡೆ-ನುಡಿಯ ಲಿಂಗಾಯತ ಕ್ರಾಂತಿ ಪತ್ರಿಕೆಯ ಮಾರ್ಗದರ್ಶಕರಾದ ಸನ್ಮಾನ್ಯಶ್ರೀ …

ಹಸಿರುಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಶ್ರೀ ಕಲ್ಯಾಣರಾವ್ ಜಿ ಮುಚಳಂಬಿ ಲಿಂಗೈಕ್ಯ

ಬೆಳಗಾವಿ: ರೈತ ಚಳವಳಿಗಳಿಗಳ ಮುಂಚೂಣಿ ನಾಯಕ, ಹಸಿರು ಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಲ್ಯಾಣರಾವ್ ಗುರಬಸಪ್ಪ ಮುಚಳಂಬಿಯವರು ಅವರು ಬೆಳಗಾವಿ …

ನೂತನ ಸಂಸತ್ ಭವನಕ್ಕೆ ಅನುಭವ ಮಂಟಪ ಎಂದು ಹೆಸರಿಡಲು ನಿಜಗುಣಾನಂದ ಸ್ವಾಮೀಜಿ ಒತ್ತಾಯ

ಬೈಲೂರು: ದೆಹಲಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸಂಸತ್ ಭವನಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡಬೇಕು ಎಂದು ಬೈಲೂರು ನಿಷ್ಕಲ ಮಂಟಪದ …

ಅಕ್ಟೋಬರ್ 3ರಂದು “ಶಿವಬಸವ ಕಾರುಣ್ಯ” ದ ಗುರು ಪ್ರವೇಶ

ಲಿಂಗಾಯತ ಕ್ರಾಂತಿ: ಉತ್ತರಕನ್ನಡ ಜಿಲ್ಲೆ ಹಳಿಯಾಳದ ಅಂಗಡಿ ಕುಟುಂಬದ ನೂತನ ಮನೆ “ಶಿವಬಸವ ಗುರುಕಾರುಣ್ಯ” ದ ಗುರು ಪ್ರವೇಶವು ಅಕ್ಟೋಬರ್ …

ಅಕ್ಕನ ಸಮರ್ಪಣಾ ಭಾವ

ಭಾರತೀಯ ಭಕ್ತಿ ಸಾಹಿತ್ಯದ ಚರಿತ್ರೆಯಲ್ಲಿ ಅಕ್ಕಮಹಾದೇವಿ ಒಬ್ಬ ವಿಶಿಷ್ಟ ಸಾಧಕಿ, ಯೋಗಿಣಿಯಾಗಿ ಕಂಡುಬರುತ್ತಾಳೆ. ಆಕೆಯ ಪ್ರೀತಿ ಪ್ರೇಮ ವಿನೂತನ ವಿಸ್ಮಯದ …

ಪ್ರಭು ಚನ್ನಬಸವ ಸ್ವಾಮೀಜಿ ವಿರಚಿತ ಮಹಾತ್ಮರ ಚರಿತಾಮೃತ ಗ್ರಂಥ ಲೋಕಾರ್ಪಣೆ

ಬೆಂಗಳೂರು: ಬೆಳಗಾವಿ ಜಿಲ್ಲೆಯ ಅಥಣಿಯ ಶ್ರೀ ಮೋಟಗಿ ಮಠ ಬೆಂಗಳೂರಿನಲ್ಲಿ ಆಯೋಜಿಸಿದ್ದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ (ಅಥಣೀಶ) ವಿರಚಿತ …

ರಂಭಾಪುರಿ ಶ್ರೀಗಳು ಢೋಂಗಿತನ ಬಿಡಲಿ

ತಮ್ಮ ಸ್ವಾರ್ಥಕ್ಕೆ ಪಂಚಪೀಠಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿರುವ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಬೇರೆಯವರನ್ನು …

“ಲಿಂಗಾನಂದರ ವಚನಧರ್ಮ ಚಳುವಳಿಗೆ” ಡಾಕ್ಟರೇಟ್ ಪದವಿ

ಲಿಂಗಾಯತ ಕ್ರಾಂತಿ : ಸುಮಾರು 50 ವರ್ಷಗಳಾಚೆಯ ನೈಜ ಬಸವತತ್ವ ಪ್ರಸಾರ, ಶರಣಧರ್ಮದ ವೈಚಾರಿಕ ಚಿಂತನೆಗಳನ್ನು ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ …

“ಅವಕಾಶ ವಂಚಿತರಿಗೆ ಬೆಳಕಾದ ಸಜ್ಜನ ರಾಜಕಾರಣಿ ಸಿದ್ದಪ್ಪ ಕಂಬಳಿಯವರು”

ರಾಜಕೀಯ ಇತಿಹಾಸದಲ್ಲಿ ಮೈಲಿಗಲ್ಲು ಸಾಧಿಸಿದ ಕರ್ನಾಟಕ ಮಹಾಪುರುಷ ಶರಣ ಸಿದ್ದಪ್ಪ ಕಂಬಳಿಯವರು. ಶಾಲಾ ಕಾಲೇಜುಗಳ ತೊರೆದು ಕೋರ್ಟ್ ಕಛೇರಿ ಬಹಿಷ್ಕಾರ …

ಸೆಪ್ಟೆಂಬರ್ 25ರಂದು ಮಹಾತ್ಮರ ಚರಿತಾಮೃತ ಗ್ರಂಥ ಬಿಡುಗಡೆ: ಪೂಜ್ಯ ನಿಜಗುಣಾನಂದ ಶ್ರೀಗಳು

ಬೆಳಗಾವಿ: ಭಾರತ ಬಹುತ್ವದ ಭಾರತಕ್ಕೆ ಧಾರ್ಮಿಕ ಗ್ರಂಥವಾಗಿ ಮಹಾತ್ಮರ ಚರಿತಾಮೃತ ಅಥಣಿಯ ಪ್ರಭು ಚನ್ನಬಸವ ಸ್ವಾಮೀಜಿ ಗ್ರಂಥ ರಚಿಸಿದ್ದಾರೆ ಎಂದು …

“ನೊಬೆಲ್” ಎಂಬ ಮನುಕುಲದ ದ್ರುವತಾರೆ…🌟

ನೂರು ವರ್ಷಗಳ ಹಿಂದೆ ಒಬ್ಬ ಉದ್ಯಮಿ ಬೆಳಗಿನ ಕಾಫ಼ಿ ಸೇವಿಸುತ್ತ ಅಂದಿನ ದಿನಪತ್ರಿಕೆಯೊಂದನ್ನ ಕೈಗೆತ್ತಿಕೊಂಡು ಓದಲು ಪ್ರಾರಂಭಿಸುತ್ತಾನೆ. ಅದರಲ್ಲಿನ ಒಂದು …

Leave a Reply

Your email address will not be published.