Home / featured / ಶಿವಯೋಗದಿಂದ ಎಲ್ಲವೂ ಸಾಧ್ಯ: ನಿಜಗುಣಾನಂದ ಶ್ರೀಗಳು

ಶಿವಯೋಗದಿಂದ ಎಲ್ಲವೂ ಸಾಧ್ಯ: ನಿಜಗುಣಾನಂದ ಶ್ರೀಗಳು

 

ಹುಬ್ಬಳ್ಳಿ(ಉಣಕಲ್): ಜಗತ್ತಿನ ಎಲ್ಲ ಧರ್ಮದ ವಿಚಾರಗಳನ್ನು ಹೇಳುವವರು ಮತ್ತು ಕೇಳುವವರು ಇರುತ್ತಾರೆ ಆದರೆ ಶರಣ ಧರ್ಮದಲ್ಲಿ ಹೇಳುವವರು ಗುರುವಾದರೆ ಕೇಳುವವರು ಶರಣರಾಗಿರುತ್ತಾರೆ. ದೇಹವೇ ದೇವಾಲಯ ಹಾಗೂ ಅರಿವು ಗುರುವಾದ ಕಾರಣ ಶರಣ ಧರ್ಮ ಬಹಳಷ್ಟು ಶ್ರೇಷ್ಠವಾಗಿದೆ ಎಂದು ಮುಂಡರಗಿ ತೋಂಟದಾರ್ಯ ಮಠ ಹಾಗೂ ಬೈಲೂರ ನಿಷ್ಕಲ ಮಂಟಪದ ಪೂಜ್ಯ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಹೇಳಿದರು.

ನಗರದ ಉಣಕಲ್ ಸದ್ಗುರು ಸಿದ್ದೇಶ್ವರ ಮಹಾಸ್ವಾಮಿಗಳ 100 ನೆಯ ವರ್ಷದ ಪುಣ್ಯಾರಾಧನೆ ಅಂಗವಾಗಿ ನಡೆದ ಗುರುದರ್ಶನ ಪ್ರವಚನದಲ್ಲಿ ಮಾತನಾಡಿದರು.

ಇಷ್ಟಲಿಂಗ ಅದು ಅರಿವಿನ ಕುರುಹು. ಆದರೆ ದುರ್ದೈವದ ಸಂಗತಿ ಎಂದರೆ ಇಗ ಲಿಂಗವನ್ನು ಜಾತಿಯ ಕುರುಹು ಕಾಣುತ್ತಿದ್ದಾರೆ. ಲಿಂಗ ಬಹಳಷ್ಟು ಅತೀ ಅದ್ಬುತವಾದ ವಿಜ್ಞಾನ ಸಮ್ಮತವಾಗಿದೆ. ಬಸವಣ್ಣನವರ ಹಾಗೂ ಇಷ್ಟಲಿಂಗದ ಕುರಿತು ಜಗತ್ತು ಬಹಳಷ್ಟು ಗೌರವ ನೀಡುತ್ತಿದೆ ಇವತ್ತು ಲಂಡನ್ ದೇಶದ ಥೇಮ್ಸ್ ನದಿಯ ದಡದಲ್ಲಿ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆಯಾಗಿದೆ ಇದಕ್ಕೆ ಇಷ್ಟಲಿಂಗದ ಶಿವಯೋಗದ ಶಕ್ತಿಯ ಸಾಧನೆಯೇ ಪ್ರಮುಖ ಕಾರಣವಾಗಿದೆ.

ಹೀಗಾಗಿ ಪ್ರತಿಯೊಬ್ಬರೂ ಇಷ್ಟಲಿಂಗ ದೀಕ್ಷೆ ಪಡೆದು ನಿರಂತರ ಶಿವಯೋಗ ಮಾಡಿದರೆ ದೇಹ ಹಾಗೂ ಮನಸ್ಸಿನ ಚೈತನ್ಯ ಹೆಚ್ಚುತ್ತದೆ. ಶಿವಯೋಗದ ಕುರಿತು ಬಹಳಷ್ಟು ವಿಸ್ತಾರ ಲಿಂಗದೀಕ್ಷಾ ಸಂದರ್ಭದಲ್ಲಿ ತಿಳಿಸುತ್ತೇನೆ ಪ್ರತಿಯೊಬ್ಬರೂ ನಾಳೆ ದೀಕ್ಷೆ ಪಡೆಯಿರಿ ಎಂದರು.

ವಿಭೂತಿ ಲಿಂಗಾಯತರ ಸಂಖ್ಯೇತ ಅಂತ ತಿಳಿದ್ದಿದ್ದಾರೆ ಆದರೆ ಅದು ಶಿವನ ಸಂಕೇತ, ಸೃಷ್ಟಿಯ ಸಂಕೇತ, ತತ್ವದ ಸಂಕೇತವಾಗಿದೆ. ವಿಭೂತಿ ಎಂದರೆ ಓಂ ನಮಃ ಶಿವಾಯ ಇದು ಪರಿಶುದ್ಧತೆಯ ಸಂಕೇತವಾಗಿದ್ದು ಪ್ರತಿಯೊಬ್ಬರೂ ಬೆಳಗ್ಗೆ ವಿಭೂತಿ ಧರಿಸಿ. ಬಸವಣ್ಣನವರ ಕೊಟ್ಟ ವಿಭೂತಿ ಧರಿಸುವುದರಿಂದ ಕರ್ಮಹರಿದ ಹೋಗುತ್ತದೆ.
ವಿಭೂತಿಯನ್ನು ದೇಹದ ತುಂಬೆಲ್ಲಾ ಹಚ್ಚಬೇಕು. ಮಹಿಳೆಯರು ಕೊರಳಲ್ಲಿ ಲಿಂಗ, ರುದ್ರಾಕ್ಷಿ ಧರಿಸುವುದು, ಹಣೆಯಲ್ಲಿ ವಿಭೂತಿ ಹೆಚ್ಚುವುದರಿಂದ ಅತ್ಯಾಚಾರಗಳು ಕಡಿಮೆಯಾಗುತ್ತವೆ.

ರುದ್ರಾಕ್ಷಿ ರುದ್ರ ಅಂದರೆ ಶಿವ ಅಕ್ಷಿ ಎಂದರೆ ಕಣ್ಣು ರುದ್ರಾಕ್ಷಿ ಎಂದರೆ ಶಿವನ ಸಚ್ಚಿದಾನಂದ ಸ್ವರೂಪವಾದ ಶಿವನಕಣ್ಣು ಎಂದರ್ಥವಾಗಿದೆ.

ಲಿಂಗಾಯತರಲ್ಲಿ ದೇವರಿಗೆ ಮಂತ್ರವಿಲ್ಲಸ ಆದರೆ ಸಾಧನೆಗೆ ನಮಃ ಶಿವಾಯ ಓಂ ಎಂದು ಮಂತ್ರವಿದೆ ಹೀಗಾಗಿ ಪ್ರತಿಯೊಬ್ಬರೂ ಲಿಂಗಪೂಜೆಯಲ್ಲಿ ನಮಃ ಶಿವಾಯ ಓಂ ಎಂದು ಮಂತ್ರ ಪಟಿಸುತ್ತಾ ಸಾಧನೆ ಮಾಡಬೇಕು.

ಭಾರತೀಯ ಸಂಸ್ಕ್ರತಿಯ ಪರಂಪರೆಯಲ್ಲಿ ಗುರು-ಶಿಷ್ಯ, ಗಂಡ-ಹೆಂಡತಿ, ತಂದೆ-ತಾಯಿ, ಅಣ್ಣಾ-ತಂಗಿ ಸಂಬಂಧಗಳನ್ನು ಸಹ ಬುಡಮೇಲು ಮಾಡುವ ಸಿದ್ದಾಂತಗಳು ಆರಂಭವಾಗಿವೆ ಅವುಗಳನ್ನು ತೊರೆದು ಬಸವಣ್ಣನವರು ನೀಡಿದ ಇಷ್ಟಲಿಂಗ ದೀಕ್ಷೆ ಪಡೆದು ಶಿವಯೋಗ ಸಾಧನೆಯ ಮೂಲಕ ನಿಮ್ಮ ಬದುಕು ಹಸನು ಮಾಡಿಕೊಳ್ಳಿ.

ನೂರಾರು ಅಜ್ಞಾನದ ಆಚಾರಗಳು, ವಿಚಾರಗಳು ಕೇಳಿ ನೀವುಗಳು ಚಂಚಲ ಮನಸ್ಸುಗಳಾಗಿದ್ದಿರಿ
ದಿನಕ್ಕೊಂದು ಮಠ, ಬೀದಿಗೊಮ್ಮೆ ನಮಸ್ಕಾರ ಮಾಡುವುದು ಬಿಡ್ರಿ ಶರಣರ ಸನ್ಮಾರ್ಗದ ದಾರಿ ಹಿಡಿದು ಬದುಕು ಹಸುನ ಮಾಡಿಕೊಳ್ಳಿ ಎಂದರು.

About nagaraj

Check Also

20 ನೇ ಕಲ್ಯಾಣ ಪರ್ವ ಕ್ಷಣಗಣನೆ ಆರಂಭ

ಲೇಖಕರು – ಸಂಗಮೇಶ ಎನ್ ಜವಾದಿ. ಪತ್ರಕರ್ತ, ಪ್ರಗತಿಪರ ಚಿಂತಕರು. ಬೀದರ ಜಿಲ್ಲೆ. ವಿಶ್ವ ಗುರು ಬಸವಣ್ಣನವರ ನೇತೃತ್ವದಲ್ಲಿ ಅಂದು …

ಕಿತ್ತೂರು ಚೆನ್ನಮ್ಮನ ಜ್ಯೋತಿಯಾತ್ರೆಯ ವೇಳಾಪಟ್ಟಿ

ಚನ್ನಮ್ಮನ ಕಿತ್ತೂರು : ಕಿತ್ತೂರು ಉತ್ಸವದ ಅಂಗವಾಗಿ ರಾಣಿ ಚನ್ನಮ್ಮ ವಿಜಯ ಜ್ಯೋತಿ‌ ಯಾತ್ರೆಯು ಅಕ್ಟೋಬರ್ 18 ರಿಂದ ಅಕ್ಟೋಬರ್ …

ವೈದ್ದಿಕರ ಕುತಂತ್ರದಿಂದ ಲಿಂಗಾಯತ ಧರ್ಮದ ಹೋರಾಟಕ್ಕೆ ಹಿನ್ನಡೆ

ಲಿಂಗಾಯತ ಕ್ರಾಂತಿ: ಲಿಂಗಾಯತ ಧರ್ಮ ಉದಯವಾಗಿದ್ದು 12 ಶತಮಾನದ ಆರಂಭದಲ್ಲಿ ಎಂಬುವುದು ಜಗತ್ತಿನ ಶ್ರೇಷ್ಠ ತತ್ವಜ್ಞಾನಿ, ಸಮಾನತೆಯ ಪ್ರತಿಪಾಧಕ, ಲಿಂಗಬೇದವನ್ನು …

ಡಾ. ಎಂ.ಬಿ ಪಾಟೀಲ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಲಿ

ನೇಗಿನಹಾಳ : ನಾಡಿನ ನೆಲ, ಜಲ, ಶಿಕ್ಷಣ ಹಾಗೂ ಜನಸಾಮಾನ್ಯರ ಜೀವನೋಪಾಯಕ್ಕಾಗಿ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ವಿಜಯಪುರ ಜಿಲ್ಲೆಯ ಬೆಳಕಾಗಿರುವ …

ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿ ಶ್ರೀ ಡಾ. ಎಂ.ಬಿ ಪಾಟೀಲರ ಜನ್ಮದಿನ

ಲಿಂಗಾಯತ ಕ್ರಾಂತಿ: ಲಿಂಗಾಯತರ ಪ್ರಶ್ನಾತೀತ ನಾಯಕ, ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿಗಳು, ನೇರ ನಡೆ-ನುಡಿಯ ಲಿಂಗಾಯತ ಕ್ರಾಂತಿ ಪತ್ರಿಕೆಯ ಮಾರ್ಗದರ್ಶಕರಾದ ಸನ್ಮಾನ್ಯಶ್ರೀ …

ಹಸಿರುಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಶ್ರೀ ಕಲ್ಯಾಣರಾವ್ ಜಿ ಮುಚಳಂಬಿ ಲಿಂಗೈಕ್ಯ

ಬೆಳಗಾವಿ: ರೈತ ಚಳವಳಿಗಳಿಗಳ ಮುಂಚೂಣಿ ನಾಯಕ, ಹಸಿರು ಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಲ್ಯಾಣರಾವ್ ಗುರಬಸಪ್ಪ ಮುಚಳಂಬಿಯವರು ಅವರು ಬೆಳಗಾವಿ …

ನೂತನ ಸಂಸತ್ ಭವನಕ್ಕೆ ಅನುಭವ ಮಂಟಪ ಎಂದು ಹೆಸರಿಡಲು ನಿಜಗುಣಾನಂದ ಸ್ವಾಮೀಜಿ ಒತ್ತಾಯ

ಬೈಲೂರು: ದೆಹಲಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸಂಸತ್ ಭವನಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡಬೇಕು ಎಂದು ಬೈಲೂರು ನಿಷ್ಕಲ ಮಂಟಪದ …

ಅಕ್ಟೋಬರ್ 3ರಂದು “ಶಿವಬಸವ ಕಾರುಣ್ಯ” ದ ಗುರು ಪ್ರವೇಶ

ಲಿಂಗಾಯತ ಕ್ರಾಂತಿ: ಉತ್ತರಕನ್ನಡ ಜಿಲ್ಲೆ ಹಳಿಯಾಳದ ಅಂಗಡಿ ಕುಟುಂಬದ ನೂತನ ಮನೆ “ಶಿವಬಸವ ಗುರುಕಾರುಣ್ಯ” ದ ಗುರು ಪ್ರವೇಶವು ಅಕ್ಟೋಬರ್ …

ಅಕ್ಕನ ಸಮರ್ಪಣಾ ಭಾವ

ಭಾರತೀಯ ಭಕ್ತಿ ಸಾಹಿತ್ಯದ ಚರಿತ್ರೆಯಲ್ಲಿ ಅಕ್ಕಮಹಾದೇವಿ ಒಬ್ಬ ವಿಶಿಷ್ಟ ಸಾಧಕಿ, ಯೋಗಿಣಿಯಾಗಿ ಕಂಡುಬರುತ್ತಾಳೆ. ಆಕೆಯ ಪ್ರೀತಿ ಪ್ರೇಮ ವಿನೂತನ ವಿಸ್ಮಯದ …

ಪ್ರಭು ಚನ್ನಬಸವ ಸ್ವಾಮೀಜಿ ವಿರಚಿತ ಮಹಾತ್ಮರ ಚರಿತಾಮೃತ ಗ್ರಂಥ ಲೋಕಾರ್ಪಣೆ

ಬೆಂಗಳೂರು: ಬೆಳಗಾವಿ ಜಿಲ್ಲೆಯ ಅಥಣಿಯ ಶ್ರೀ ಮೋಟಗಿ ಮಠ ಬೆಂಗಳೂರಿನಲ್ಲಿ ಆಯೋಜಿಸಿದ್ದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ (ಅಥಣೀಶ) ವಿರಚಿತ …

ರಂಭಾಪುರಿ ಶ್ರೀಗಳು ಢೋಂಗಿತನ ಬಿಡಲಿ

ತಮ್ಮ ಸ್ವಾರ್ಥಕ್ಕೆ ಪಂಚಪೀಠಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿರುವ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಬೇರೆಯವರನ್ನು …

“ವೇದಕ್ಕೆ ಒರೆಯ ಕಟ್ಟುವೆ” – ಕೃತಿ ಲೋಕಾರ್ಪಣೆ

ಲಿಂಗಾಯತರಿಗೆ ಲಿಂಗಾಯತ ಧರ್ಮದ ಇತಿಹಾಸವೇ ಗೊತ್ತಿಲ್ಲದಿರುವುದು ದೊಡ್ಡ ದುರಂತ ಲಿಂಗಾಯತ ಧರ್ಮೀಯರು ವೈದಿಕ ಆಚರಣೆಯ ಸೆಳೆತಕ್ಕೆ ಸಿಲುಕಿಕೊಂಡಿದ್ದಾರೆ. ಡಾ.ಜೆ.ಎಸ್.ಪಾಟೀಲರ ” …

“ಲಿಂಗಾನಂದರ ವಚನಧರ್ಮ ಚಳುವಳಿಗೆ” ಡಾಕ್ಟರೇಟ್ ಪದವಿ

ಲಿಂಗಾಯತ ಕ್ರಾಂತಿ : ಸುಮಾರು 50 ವರ್ಷಗಳಾಚೆಯ ನೈಜ ಬಸವತತ್ವ ಪ್ರಸಾರ, ಶರಣಧರ್ಮದ ವೈಚಾರಿಕ ಚಿಂತನೆಗಳನ್ನು ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ …

“ಅವಕಾಶ ವಂಚಿತರಿಗೆ ಬೆಳಕಾದ ಸಜ್ಜನ ರಾಜಕಾರಣಿ ಸಿದ್ದಪ್ಪ ಕಂಬಳಿಯವರು”

ರಾಜಕೀಯ ಇತಿಹಾಸದಲ್ಲಿ ಮೈಲಿಗಲ್ಲು ಸಾಧಿಸಿದ ಕರ್ನಾಟಕ ಮಹಾಪುರುಷ ಶರಣ ಸಿದ್ದಪ್ಪ ಕಂಬಳಿಯವರು. ಶಾಲಾ ಕಾಲೇಜುಗಳ ತೊರೆದು ಕೋರ್ಟ್ ಕಛೇರಿ ಬಹಿಷ್ಕಾರ …

ಸೆಪ್ಟೆಂಬರ್ 25ರಂದು ಮಹಾತ್ಮರ ಚರಿತಾಮೃತ ಗ್ರಂಥ ಬಿಡುಗಡೆ: ಪೂಜ್ಯ ನಿಜಗುಣಾನಂದ ಶ್ರೀಗಳು

ಬೆಳಗಾವಿ: ಭಾರತ ಬಹುತ್ವದ ಭಾರತಕ್ಕೆ ಧಾರ್ಮಿಕ ಗ್ರಂಥವಾಗಿ ಮಹಾತ್ಮರ ಚರಿತಾಮೃತ ಅಥಣಿಯ ಪ್ರಭು ಚನ್ನಬಸವ ಸ್ವಾಮೀಜಿ ಗ್ರಂಥ ರಚಿಸಿದ್ದಾರೆ ಎಂದು …

Leave a Reply

Your email address will not be published.