ರೈತರ ಬಾಳು ‘ಹಾಂ’ ಅನ್ನುವದರೊಳಗೆ ತಿಂಗಳಾಗಿ ಪಗಾರ ಬಂದಂತಲ್ಲ!
nagaraj
November 9, 2020
featured, General News
ಸಿಂದಗಿ: ಅವರು ಆರು ತಿಂಗಳು, ಒಂದು ವರ್ಷ ಅವರೇ ದುಡಿದ ಅನ್ನಕ್ಕಾಗಿ ಕಾಯಬೇಕು. ಅದೂ ಯಾವ ಬೆಳೆಗೆ ಎಷ್ಟು ಬರುತ್ತೆ ಅನ್ನೋ ಗ್ಯಾರಂಟಿಯೇ ಇಲ್ಲದೆ. ಯಾವುದಕ್ಕೂ ಒಂದು ಬೆಲೆ ಅಂತ ಇಲ್ಲವೇ ಇಲ್ಲವಲ್ಲ. ಹಾಗಾಗಿ ಈಗಾಗಲೇ ರೇಟು ಹೇಳದೆಯೇ ಬಹುತೇಕ ಕಬ್ಬಿನ ಕಾರಖಾನೆಗಳು ಶುರುವಾಗಿವೆ. ಅವರು ಕೊಟ್ಟಿದ್ದೇ ರೇಟು. ಇಟ್ಟಿದ್ದೇ ಬಿಲ್ಲು. ರೈತರಿಗೂ ಕಬ್ಬು ಹೋದರೆ ಸಾಕೆನ್ನುವ ಹುಕಿ. ಅವರ ಹೊಟ್ಟೆಯ ತ್ರಾಸು ಬಾಯಿಗೆ ಬಂದಿರುತ್ತೆ. ಎಷ್ಟಾದರೂ ಬಂದರೆ ಸಾಕೆನ್ನುವ ಹಪಹಪಿ. ಏನು ಮಾಡುವುದು..
ನಿನ್ನೆಗೆ ನಮ್ಮ ಹತ್ತಿ ಬಿಡಿಸೋದು ಮುಗಿದಿತ್ತು. ರಾತ್ರಿ ತುಂಬಿ, ಇವತ್ತು ಬೆಳಗ್ಗೆ ಮಿಲ್ ಗೆ ಕಳಿಸಿದೆವು. ಏನೊ ನಿರಾಳ ಭಾವ. ಇನ್ನೂ ಹೈರಾಣಾದ್ರೆ, ಬುದ್ಧಿವಂತಿಕೆಯ ಲೆಕ್ಕಾಚಾರದಲ್ಲಿದ್ರೆ, ನಿರಂತರವಾಗಿ ಹೊಲಕ್ಕೆ ದುಡಿದರೆ ಮತ್ತೂ ಒಳ್ಳೆಯದಾಗಬಹುದು ಅನಿಸಿತು. ಈ ಸಲ ಹೆಚ್ಚಿನ ಮಳೆಯಾಗದಿದ್ದರೆ ಎಲ್ಲರದೂ ಲಾಭಾಂಶ ಚೆನ್ನಾಗಿರುತ್ತಿತ್ತು. ಇನ್ನು ತೊಗರಿ, ಕಬ್ಬು ಇದೆ. ಹತ್ತಿ ಇನ್ನೊಂದು ಸುತ್ತು ಬಿಡಿಸಬೇಕು.
ಹೊಲ ಮಾಡುವವರಿಗೆ, ಉಳಿದೆಲ್ಲ ಶ್ರಮಿಕರಿಗೆ ಶರಣು ಹೇಳಲೇಬೇಕು.
ನಮ್ಮದು ಬರೀ ಭಾಷಣ ಮಾಡಲಷ್ಟೇ ‘ಕೃಷಿ ಪ್ರಧಾನ ದೇಶ’. ಬೇರೆ ವಿಷಯಗಳಿಗೆ ಕೊಡೋ ಗಮನವನ್ನು ಸರಕಾರಗಳು, ಬುದ್ಧಿಗೇಡಿ ಮುಖಂಡರು ರೈತಾಪಿ ಜನಕ್ಕೆ ಕೊಟ್ಟಿದ್ದರೆ ‘ಗ್ರಾಮೀಣ ಭಾರತ’ ಹೀಗಿರುತ್ತಿರಲಿಲ್ಲ. ಮಾಹಿತಿ ಕ್ರಾಂತಿ, ಡಿಜಿಟಲ್- ಮೇಕ್ ಇನ್ ಇಂಡಿಯಾ ಅನ್ನುತ್ತೇವೆಯೇ ಹೊರತು ಇಲ್ಲೇ ಹೊಲದಲ್ಲಿ ‘ಮೇಕಿಂಗ್’ ಮಾಡಿರೋ ಬೆಳೆಗಳನ್ನು ಕೇಳೋರಿಲ್ಲ. ರೈತರ ಮನೆಯಲ್ಲಿ ಟಿವಿ, ಕಿಸೆಯಲ್ಲಿ ಉದ್ರಿ ನೆಟ್ ಇರೋ ಮೊಬೈಲಿವೆ. ಆದರೆ; ಅವರ ಹೊಟ್ಟೆ ಮತ್ತು ನೆತ್ತಿ ಈಗಲೂ ಹಸಿದೇ ಇವೆ.
ಯಾವಾಗ ಇದೆಲ್ಲ ಮುಗಿದು, ರೈತರದು ಘನತೆಯ ಬದುಕು ರೂಪುಗೊಳ್ಳುತ್ತೋ.. ಏನು ಮಾಡೋದು ಒಗ್ಗಟ್ಟಿಲ್ಲ ನಮ್ಮಲ್ಲಿ. ಎಂ.ಡಿ. ನಂಜುಂಡಸ್ವಾಮಿ ಯವರಂತಹ ಚೇತನಗಳೂ ಈಗಿಲ್ಲ. ಬುದ್ಧಿ ಇರೋ ಬೆಳೆಯೂ ಒಣಗಿ ಹೋಗಿದೆ.
-ಶಿವಕುಮಾರ್ ಉಪ್ಪಿನ,
88809 59555
Check Also
ಲೇಖಕರು – ಸಂಗಮೇಶ ಎನ್ ಜವಾದಿ. ಪತ್ರಕರ್ತ, ಪ್ರಗತಿಪರ ಚಿಂತಕರು. ಬೀದರ ಜಿಲ್ಲೆ. ವಿಶ್ವ ಗುರು ಬಸವಣ್ಣನವರ ನೇತೃತ್ವದಲ್ಲಿ ಅಂದು …
ಚನ್ನಮ್ಮನ ಕಿತ್ತೂರು : ಕಿತ್ತೂರು ಉತ್ಸವದ ಅಂಗವಾಗಿ ರಾಣಿ ಚನ್ನಮ್ಮ ವಿಜಯ ಜ್ಯೋತಿ ಯಾತ್ರೆಯು ಅಕ್ಟೋಬರ್ 18 ರಿಂದ ಅಕ್ಟೋಬರ್ …
ಲಿಂಗಾಯತ ಕ್ರಾಂತಿ: ಲಿಂಗಾಯತ ಧರ್ಮ ಉದಯವಾಗಿದ್ದು 12 ಶತಮಾನದ ಆರಂಭದಲ್ಲಿ ಎಂಬುವುದು ಜಗತ್ತಿನ ಶ್ರೇಷ್ಠ ತತ್ವಜ್ಞಾನಿ, ಸಮಾನತೆಯ ಪ್ರತಿಪಾಧಕ, ಲಿಂಗಬೇದವನ್ನು …
ನೇಗಿನಹಾಳ : ನಾಡಿನ ನೆಲ, ಜಲ, ಶಿಕ್ಷಣ ಹಾಗೂ ಜನಸಾಮಾನ್ಯರ ಜೀವನೋಪಾಯಕ್ಕಾಗಿ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ವಿಜಯಪುರ ಜಿಲ್ಲೆಯ ಬೆಳಕಾಗಿರುವ …
ಲಿಂಗಾಯತ ಕ್ರಾಂತಿ: ಲಿಂಗಾಯತರ ಪ್ರಶ್ನಾತೀತ ನಾಯಕ, ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿಗಳು, ನೇರ ನಡೆ-ನುಡಿಯ ಲಿಂಗಾಯತ ಕ್ರಾಂತಿ ಪತ್ರಿಕೆಯ ಮಾರ್ಗದರ್ಶಕರಾದ ಸನ್ಮಾನ್ಯಶ್ರೀ …
ಬೆಳಗಾವಿ: ರೈತ ಚಳವಳಿಗಳಿಗಳ ಮುಂಚೂಣಿ ನಾಯಕ, ಹಸಿರು ಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಲ್ಯಾಣರಾವ್ ಗುರಬಸಪ್ಪ ಮುಚಳಂಬಿಯವರು ಅವರು ಬೆಳಗಾವಿ …
ಬೈಲೂರು: ದೆಹಲಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸಂಸತ್ ಭವನಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡಬೇಕು ಎಂದು ಬೈಲೂರು ನಿಷ್ಕಲ ಮಂಟಪದ …
ಲಿಂಗಾಯತ ಕ್ರಾಂತಿ: ಉತ್ತರಕನ್ನಡ ಜಿಲ್ಲೆ ಹಳಿಯಾಳದ ಅಂಗಡಿ ಕುಟುಂಬದ ನೂತನ ಮನೆ “ಶಿವಬಸವ ಗುರುಕಾರುಣ್ಯ” ದ ಗುರು ಪ್ರವೇಶವು ಅಕ್ಟೋಬರ್ …
ಭಾರತೀಯ ಭಕ್ತಿ ಸಾಹಿತ್ಯದ ಚರಿತ್ರೆಯಲ್ಲಿ ಅಕ್ಕಮಹಾದೇವಿ ಒಬ್ಬ ವಿಶಿಷ್ಟ ಸಾಧಕಿ, ಯೋಗಿಣಿಯಾಗಿ ಕಂಡುಬರುತ್ತಾಳೆ. ಆಕೆಯ ಪ್ರೀತಿ ಪ್ರೇಮ ವಿನೂತನ ವಿಸ್ಮಯದ …
ಬೆಂಗಳೂರು: ಬೆಳಗಾವಿ ಜಿಲ್ಲೆಯ ಅಥಣಿಯ ಶ್ರೀ ಮೋಟಗಿ ಮಠ ಬೆಂಗಳೂರಿನಲ್ಲಿ ಆಯೋಜಿಸಿದ್ದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ (ಅಥಣೀಶ) ವಿರಚಿತ …
ತಮ್ಮ ಸ್ವಾರ್ಥಕ್ಕೆ ಪಂಚಪೀಠಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿರುವ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಬೇರೆಯವರನ್ನು …
ಲಿಂಗಾಯತರಿಗೆ ಲಿಂಗಾಯತ ಧರ್ಮದ ಇತಿಹಾಸವೇ ಗೊತ್ತಿಲ್ಲದಿರುವುದು ದೊಡ್ಡ ದುರಂತ ಲಿಂಗಾಯತ ಧರ್ಮೀಯರು ವೈದಿಕ ಆಚರಣೆಯ ಸೆಳೆತಕ್ಕೆ ಸಿಲುಕಿಕೊಂಡಿದ್ದಾರೆ. ಡಾ.ಜೆ.ಎಸ್.ಪಾಟೀಲರ ” …
ಲಿಂಗಾಯತ ಕ್ರಾಂತಿ : ಸುಮಾರು 50 ವರ್ಷಗಳಾಚೆಯ ನೈಜ ಬಸವತತ್ವ ಪ್ರಸಾರ, ಶರಣಧರ್ಮದ ವೈಚಾರಿಕ ಚಿಂತನೆಗಳನ್ನು ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ …
ರಾಜಕೀಯ ಇತಿಹಾಸದಲ್ಲಿ ಮೈಲಿಗಲ್ಲು ಸಾಧಿಸಿದ ಕರ್ನಾಟಕ ಮಹಾಪುರುಷ ಶರಣ ಸಿದ್ದಪ್ಪ ಕಂಬಳಿಯವರು. ಶಾಲಾ ಕಾಲೇಜುಗಳ ತೊರೆದು ಕೋರ್ಟ್ ಕಛೇರಿ ಬಹಿಷ್ಕಾರ …
ಬೆಳಗಾವಿ: ಭಾರತ ಬಹುತ್ವದ ಭಾರತಕ್ಕೆ ಧಾರ್ಮಿಕ ಗ್ರಂಥವಾಗಿ ಮಹಾತ್ಮರ ಚರಿತಾಮೃತ ಅಥಣಿಯ ಪ್ರಭು ಚನ್ನಬಸವ ಸ್ವಾಮೀಜಿ ಗ್ರಂಥ ರಚಿಸಿದ್ದಾರೆ ಎಂದು …