Home / featured / ಶರಣರು ಶೈವ/ವೀರಶೈವಗಳನ್ನೆಲ್ಲ ಅಲ್ಲಗಳೆದಿದ್ದರು.

ಶರಣರು ಶೈವ/ವೀರಶೈವಗಳನ್ನೆಲ್ಲ ಅಲ್ಲಗಳೆದಿದ್ದರು.

ಬಸವಾದಿ ಶರಣರು ಒಂದು ಹೊಸ ವಿಚಾರಧಾರೆಯನ್ನು ಹುಟ್ಟುಹಾಕಿದ್ದರು ಎನ್ನುವುದು ಸೂರ್ಯನಷ್ಟೆ ಸತ್ಯವಾಗಿದ್ದರೂ ಪಟ್ಟಭದ್ರರು ಅವರು ಹಿಂದೂ ಧರ್ಮದ ಸುಧಾರಣಾವಾದಿಗಳುˌ ಶೈವ/ವೀರಶೈವ ಪಂಥದ ಅನುಯಾಯಿಗಳು ಎಂದು ವಾದಿಸುತ್ತಲೆ ಇರುತ್ತಾರೆ. ಈ ಮೊಂಡುವಾದಗಳು ಶರಣರು ಪ್ರತಿಪಾದಿಸಿದ ವೈಚಾರಿಕ ತತ್ವಗಳಿಗೆ ಹೆದರಿ ಹುಟ್ಟಿದಂತವು ಎಂದು ಬೇರೆ ಹೇಳಬೇಕಿಲ್ಲ. ಚೆನ್ನಬಸವಣ್ಣನವರು ಶರಣರು ಹೇಗೆ ಶೈವ ತತ್ವವನ್ನು ನಿರಾಕರಿಸಿದರು ಎಂದು ವರ್ಣಿಸುವ ವಚನ :

” ಅಂಧಕನು ಓಡ ಹಿಡಿದು ತನ್ನ
ಸ್ವರೂಪವ ತಾ ನೋಡುವಂತೆ,
ಶೈವ ಗುರುವಿನಲ್ಲಿ ಲಿಂಗಸಾಹಿತ್ಯವಾದ
ಶಿಷ್ಯನ ವಿಧಿಯ ನೋಡಿರೆ !
ಗುರುವಿಂಗೆ ದೂರಾರ್ಚನೆ,
ಶಿಷ್ಯಂಗೆ ಇಷ್ಟಲಿಂಗಾರ್ಚನೆ,
ಗುರು ವಾಯುಪ್ರಾಣಿ,
ಶಿಷ್ಯ ಲಿಂಗಪ್ರಾಣಿ,
ಗುರು ಭೂತದೇಹಿ,
ಶಿಷ್ಯ ಲಿಂಗದೇಹಿ,
ಗುರು ಅನರ್ಪಿತ ಭುಂಜಕ,
ಶಿಷ್ಯ ಲಿಂಗಾರ್ಪಿತ ಭುಂಜಕ,
ಗುರು ಅಗ್ನಿ ದಹನ ಸಂಪತ್ತು,
ಶಿಷ್ಯ ಸಿದ್ಧಸಮಾಧಿ ಸಂಪತ್ತು,
ಎಂತುಂಟು ಹೇಳಿರಣ್ಣಾ ?
ಇವರಿಬ್ಬರ ಗುರು ಶಿಷ್ಯ ಸಂಬಂಧಕ್ಕೆ
ನರಕ ತಪ್ಪದು ಕಾಣಾ,
ಕೂಡಲಚೆನ್ನಸಂಗಮದೇವಾ.”

ಸವಸಂ : 3, ವಚನ-895 ಪುಟ-277.

ಅಂಧಕನು ಓಡ ಹಿಡಿದು ತನ್ನ ಸ್ವರೂಪವ ತಾ ನೋಡುವಂತೆ, ಶೈವ ಗುರುವಿನಲ್ಲಿ ಲಿಂಗಸಾಹಿತ್ಯವಾದ ಶಿಷ್ಯನ ವಿಧಿಯ ನೋಡಿರೆ !

ಈ ಶೈವರು ಬಸವಣ್ಣನವರ ಲಿಂಗಾಯತ ಧರ್ಮ ಪ್ರವರ್ಧಮಾನಕ್ಕೆ ಬಂದ ಮೇಲೆ ಅತ್ತ ಸಂಪೂರ್ಣ ಶೈವರಾಗಿರೂ ಉಳಿಯದೆ ಇತ್ತ ಸಂಪೂರ್ಣ ಲಿಂಗಾಯತರೂ ಆಗದೆ ಇಂದಿನ ವೀರಶೈವರು ಆಡುವಂತೆ ಆಡುತ್ತಿರುತ್ತಾರೆ. ಈ ರೀತಿಯ ಸಂಪೂರ್ಣ ಲಿಂಗಾಯತ ತತ್ವಬದ್ಧರಲ್ಲದ ಶೈವ ಗುರುವಿನಿಂದ ಲಿಂಗಸಾಹಿತ್ಯವಾದ ಶಿಷ್ಯನ ಪರಿಸ್ಥಿತಿಯು ಕುರುಡನೊಬ್ಬ ಕನ್ನಡಿ ಹಿಡಿದು ತನ್ನ ಪ್ರತಿಬಿಂಬ ನೋಡಿದಂತೆ ಎನ್ನುತ್ತಾರೆ ಚೆನ್ನಬಸವಣ್ಣ.

ಗುರುವಿಂಗೆ ದೂರಾರ್ಚನೆ, ಶಿಷ್ಯಂಗೆ ಇಷ್ಟಲಿಂಗಾರ್ಚನೆ, ಗುರು ವಾಯುಪ್ರಾಣಿ, ಶಿಷ್ಯ ಲಿಂಗಪ್ರಾಣಿ, ಗುರು ಭೂತದೇಹಿ,ಶಿಷ್ಯ ಲಿಂಗದೇಹಿ,

ಆ ಅತಂತ್ರ ಶೈವ ಗುರು ಅನೇಕ ಬಗೆಯ ದೂರಾರ್ಚನೆ ಮಾಡುತ್ತಿರುತ್ತಾನೆ. ಆತನ ಶಿಷ್ಯ ಲಿಂಗಾರ್ಚನೆ ಮಾಡುತ್ತಾನೆ. ಗುರು ಯೋಗ ಸಾಧನೆ ಮಾಡುವ ಪವನ ಸಾಧಕನಾದರೆ ಶಿಷ್ಯ ಲಿಂಗಾಂಗಯೋಗ ಸಾಧಕ. ಅಂಥ ಗುರುವಿನದು ಭೂತ ದೇಹವಾದರೆˌ ಶಿಷ್ಯನದು ಲಿಂಗದೇಹ.

ಗುರು ಅನರ್ಪಿತ ಭುಂಜಕ, ಶಿಷ್ಯ ಲಿಂಗಾರ್ಪಿತ ಭುಂಜಕ, ಗುರು ಅಗ್ನಿ ದಹನ ಸಂಪತ್ತು, ಶಿಷ್ಯ ಸಿದ್ಧಸಮಾಧಿ ಸಂಪತ್ತು, ಎಂತುಂಟು ಹೇಳಿರಣ್ಣಾ ?

ಶೈವ ಗುರು ಲಿಂಗಕ್ಕರ್ಪಿಸದೆ ಫ್ರಸಾದ ಸೇವಿಸುತ್ತಾನೆ. ಶಿಷ್ಯ ಲಿಂಗಕ್ಕರ್ಪಿಸಿ ಪ್ರಸಾದ ಸೇವಿಸುತ್ತಾನೆ. ಗುರು ಅಗ್ನಿದಹನ ಸಂಪತ್ತು ಅಂದರೆ ವೈದಿಕರಂತೆ ಅಗ್ನಿ ಆರಾಧಕ. ಶಿಷ್ಯ ಸಿದ್ಧಸಮಾಧಿ ಸಾಧಕ. ಇವರಿಬ್ಬರ ಗುರು ಶಿಷ್ಯ ಸಂಬಂಧ ಹೊಂದಾಣಿಕೆಯಾಗದು.

ಇವರಿಬ್ಬರ ಗುರು ಶಿಷ್ಯ ಸಂಬಂಧಕ್ಕೆ ನರಕ ತಪ್ಪದು ಕಾಣಾ, ಕೂಡಲಚೆನ್ನಸಂಗಮದೇವಾ.

ಇಂಥ ವೈದುರ್ಯದ ಮತ್ತು ಪರಸ್ಪರ ವಿರುಧ್ಧ ಸಿದ್ಧಾಂತದ ಗುರು ಶಿಷ್ಯರ ಸಂಬಂಧವು ನರಕದ ಯಾತನೆಯಂತೆ ಎನ್ನುತ್ತಾರೆ ಚೆನ್ನಬಸವಣ್ಣನವರು.

~ ಡಾ. ಜೆ ಎಸ್ ಪಾಟೀಲ.

ವಿಜಯಪುರ

About nagaraj

Check Also

20 ನೇ ಕಲ್ಯಾಣ ಪರ್ವ ಕ್ಷಣಗಣನೆ ಆರಂಭ

ಲೇಖಕರು – ಸಂಗಮೇಶ ಎನ್ ಜವಾದಿ. ಪತ್ರಕರ್ತ, ಪ್ರಗತಿಪರ ಚಿಂತಕರು. ಬೀದರ ಜಿಲ್ಲೆ. ವಿಶ್ವ ಗುರು ಬಸವಣ್ಣನವರ ನೇತೃತ್ವದಲ್ಲಿ ಅಂದು …

ಕಿತ್ತೂರು ಚೆನ್ನಮ್ಮನ ಜ್ಯೋತಿಯಾತ್ರೆಯ ವೇಳಾಪಟ್ಟಿ

ಚನ್ನಮ್ಮನ ಕಿತ್ತೂರು : ಕಿತ್ತೂರು ಉತ್ಸವದ ಅಂಗವಾಗಿ ರಾಣಿ ಚನ್ನಮ್ಮ ವಿಜಯ ಜ್ಯೋತಿ‌ ಯಾತ್ರೆಯು ಅಕ್ಟೋಬರ್ 18 ರಿಂದ ಅಕ್ಟೋಬರ್ …

ವೈದ್ದಿಕರ ಕುತಂತ್ರದಿಂದ ಲಿಂಗಾಯತ ಧರ್ಮದ ಹೋರಾಟಕ್ಕೆ ಹಿನ್ನಡೆ

ಲಿಂಗಾಯತ ಕ್ರಾಂತಿ: ಲಿಂಗಾಯತ ಧರ್ಮ ಉದಯವಾಗಿದ್ದು 12 ಶತಮಾನದ ಆರಂಭದಲ್ಲಿ ಎಂಬುವುದು ಜಗತ್ತಿನ ಶ್ರೇಷ್ಠ ತತ್ವಜ್ಞಾನಿ, ಸಮಾನತೆಯ ಪ್ರತಿಪಾಧಕ, ಲಿಂಗಬೇದವನ್ನು …

ಡಾ. ಎಂ.ಬಿ ಪಾಟೀಲ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಲಿ

ನೇಗಿನಹಾಳ : ನಾಡಿನ ನೆಲ, ಜಲ, ಶಿಕ್ಷಣ ಹಾಗೂ ಜನಸಾಮಾನ್ಯರ ಜೀವನೋಪಾಯಕ್ಕಾಗಿ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ವಿಜಯಪುರ ಜಿಲ್ಲೆಯ ಬೆಳಕಾಗಿರುವ …

ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿ ಶ್ರೀ ಡಾ. ಎಂ.ಬಿ ಪಾಟೀಲರ ಜನ್ಮದಿನ

ಲಿಂಗಾಯತ ಕ್ರಾಂತಿ: ಲಿಂಗಾಯತರ ಪ್ರಶ್ನಾತೀತ ನಾಯಕ, ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿಗಳು, ನೇರ ನಡೆ-ನುಡಿಯ ಲಿಂಗಾಯತ ಕ್ರಾಂತಿ ಪತ್ರಿಕೆಯ ಮಾರ್ಗದರ್ಶಕರಾದ ಸನ್ಮಾನ್ಯಶ್ರೀ …

ಹಸಿರುಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಶ್ರೀ ಕಲ್ಯಾಣರಾವ್ ಜಿ ಮುಚಳಂಬಿ ಲಿಂಗೈಕ್ಯ

ಬೆಳಗಾವಿ: ರೈತ ಚಳವಳಿಗಳಿಗಳ ಮುಂಚೂಣಿ ನಾಯಕ, ಹಸಿರು ಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಲ್ಯಾಣರಾವ್ ಗುರಬಸಪ್ಪ ಮುಚಳಂಬಿಯವರು ಅವರು ಬೆಳಗಾವಿ …

ನೂತನ ಸಂಸತ್ ಭವನಕ್ಕೆ ಅನುಭವ ಮಂಟಪ ಎಂದು ಹೆಸರಿಡಲು ನಿಜಗುಣಾನಂದ ಸ್ವಾಮೀಜಿ ಒತ್ತಾಯ

ಬೈಲೂರು: ದೆಹಲಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸಂಸತ್ ಭವನಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡಬೇಕು ಎಂದು ಬೈಲೂರು ನಿಷ್ಕಲ ಮಂಟಪದ …

ಅಕ್ಟೋಬರ್ 3ರಂದು “ಶಿವಬಸವ ಕಾರುಣ್ಯ” ದ ಗುರು ಪ್ರವೇಶ

ಲಿಂಗಾಯತ ಕ್ರಾಂತಿ: ಉತ್ತರಕನ್ನಡ ಜಿಲ್ಲೆ ಹಳಿಯಾಳದ ಅಂಗಡಿ ಕುಟುಂಬದ ನೂತನ ಮನೆ “ಶಿವಬಸವ ಗುರುಕಾರುಣ್ಯ” ದ ಗುರು ಪ್ರವೇಶವು ಅಕ್ಟೋಬರ್ …

ಅಕ್ಕನ ಸಮರ್ಪಣಾ ಭಾವ

ಭಾರತೀಯ ಭಕ್ತಿ ಸಾಹಿತ್ಯದ ಚರಿತ್ರೆಯಲ್ಲಿ ಅಕ್ಕಮಹಾದೇವಿ ಒಬ್ಬ ವಿಶಿಷ್ಟ ಸಾಧಕಿ, ಯೋಗಿಣಿಯಾಗಿ ಕಂಡುಬರುತ್ತಾಳೆ. ಆಕೆಯ ಪ್ರೀತಿ ಪ್ರೇಮ ವಿನೂತನ ವಿಸ್ಮಯದ …

ಪ್ರಭು ಚನ್ನಬಸವ ಸ್ವಾಮೀಜಿ ವಿರಚಿತ ಮಹಾತ್ಮರ ಚರಿತಾಮೃತ ಗ್ರಂಥ ಲೋಕಾರ್ಪಣೆ

ಬೆಂಗಳೂರು: ಬೆಳಗಾವಿ ಜಿಲ್ಲೆಯ ಅಥಣಿಯ ಶ್ರೀ ಮೋಟಗಿ ಮಠ ಬೆಂಗಳೂರಿನಲ್ಲಿ ಆಯೋಜಿಸಿದ್ದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ (ಅಥಣೀಶ) ವಿರಚಿತ …

ರಂಭಾಪುರಿ ಶ್ರೀಗಳು ಢೋಂಗಿತನ ಬಿಡಲಿ

ತಮ್ಮ ಸ್ವಾರ್ಥಕ್ಕೆ ಪಂಚಪೀಠಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿರುವ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಬೇರೆಯವರನ್ನು …

“ವೇದಕ್ಕೆ ಒರೆಯ ಕಟ್ಟುವೆ” – ಕೃತಿ ಲೋಕಾರ್ಪಣೆ

ಲಿಂಗಾಯತರಿಗೆ ಲಿಂಗಾಯತ ಧರ್ಮದ ಇತಿಹಾಸವೇ ಗೊತ್ತಿಲ್ಲದಿರುವುದು ದೊಡ್ಡ ದುರಂತ ಲಿಂಗಾಯತ ಧರ್ಮೀಯರು ವೈದಿಕ ಆಚರಣೆಯ ಸೆಳೆತಕ್ಕೆ ಸಿಲುಕಿಕೊಂಡಿದ್ದಾರೆ. ಡಾ.ಜೆ.ಎಸ್.ಪಾಟೀಲರ ” …

“ಲಿಂಗಾನಂದರ ವಚನಧರ್ಮ ಚಳುವಳಿಗೆ” ಡಾಕ್ಟರೇಟ್ ಪದವಿ

ಲಿಂಗಾಯತ ಕ್ರಾಂತಿ : ಸುಮಾರು 50 ವರ್ಷಗಳಾಚೆಯ ನೈಜ ಬಸವತತ್ವ ಪ್ರಸಾರ, ಶರಣಧರ್ಮದ ವೈಚಾರಿಕ ಚಿಂತನೆಗಳನ್ನು ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ …

“ಅವಕಾಶ ವಂಚಿತರಿಗೆ ಬೆಳಕಾದ ಸಜ್ಜನ ರಾಜಕಾರಣಿ ಸಿದ್ದಪ್ಪ ಕಂಬಳಿಯವರು”

ರಾಜಕೀಯ ಇತಿಹಾಸದಲ್ಲಿ ಮೈಲಿಗಲ್ಲು ಸಾಧಿಸಿದ ಕರ್ನಾಟಕ ಮಹಾಪುರುಷ ಶರಣ ಸಿದ್ದಪ್ಪ ಕಂಬಳಿಯವರು. ಶಾಲಾ ಕಾಲೇಜುಗಳ ತೊರೆದು ಕೋರ್ಟ್ ಕಛೇರಿ ಬಹಿಷ್ಕಾರ …

ಸೆಪ್ಟೆಂಬರ್ 25ರಂದು ಮಹಾತ್ಮರ ಚರಿತಾಮೃತ ಗ್ರಂಥ ಬಿಡುಗಡೆ: ಪೂಜ್ಯ ನಿಜಗುಣಾನಂದ ಶ್ರೀಗಳು

ಬೆಳಗಾವಿ: ಭಾರತ ಬಹುತ್ವದ ಭಾರತಕ್ಕೆ ಧಾರ್ಮಿಕ ಗ್ರಂಥವಾಗಿ ಮಹಾತ್ಮರ ಚರಿತಾಮೃತ ಅಥಣಿಯ ಪ್ರಭು ಚನ್ನಬಸವ ಸ್ವಾಮೀಜಿ ಗ್ರಂಥ ರಚಿಸಿದ್ದಾರೆ ಎಂದು …

Leave a Reply

Your email address will not be published.