ಬೆಂಗಳೂರು : ಅಭಿಪ್ರಾಯಗಳಲ್ಲಿ ಭಿನ್ನಾಭಿಪ್ರಾಯ ಇರುವದು ಮಾನವ ಸಹಜ ಗುಣದರ್ಮ. ಅದು ಅಭಿವೃದ್ಧಿಯ ಸಂಕೇತ, ಸಮಾಜದಲ್ಲಿ ಹೊಸ ವಿಚಾರ, ಹೊಸ ಸಂಶೋದನೆ,ಹೊಸ ಸಿದ್ಧಾಂತ, ಇವುಗಳಿಂದಲೆ ಆಗಿದ್ದಲ್ಲವೆ ಮಾನವನ ವಿಕಾಸ. ಹೊಸದನ್ನು ಒಪ್ಪಿಕೊಳ್ಳದೆ ಹಳೆಯದನ್ನು ತ್ಯಜಿಸದೆ ಇದ್ದರೆ, ಇಂದು ನಾವು ಬತ್ತಲೆ ಸಮಾಜದಲ್ಲಿ ಇರಬೇಕಾಗುತ್ತಿತ್ತು. ಕಲ್ಲು ಕಲ್ಲುಗಳನ್ನು ತಿಕ್ಕಿ ಬೆಂಕಿ ಹಚ್ಚಬೇಕಾಗಿತ್ತು.ಪ್ರಾಣಿಗಳ ಹಸಿ ಮಾಂಸವನ್ನು ತಿನ್ನಬೇಕಾಗಿತ್ತು, ಕತ್ತೆಗಳ ಬೆನ್ನೂ ಸಂಪರ್ಕ ಸಾಧನ ವಾಗುತ್ತಿತ್ತು. ಹೊಸದಕ್ಕೆ ತೆರೆದುಕೊಂಡಗಲೆ ನಾವು ಇಂದು ನಾಗರಿಕ ಸಮಾಜದಲ್ಲಿ ಬದುಕುತ್ತಿದ್ದೆವೆ.
ಪೃಥ್ವಿ ದುಂಡಗಾಗಿದೆ ಎಂದ ಪೈಥಾಗೋರಸ್ ನನ್ನು ಕೊಂದಿರಿ. ಭೂಮಿಗೆ ಗುರುತ್ವಾಕರ್ಷಣ ಶಕ್ತಿ ಇದೆ ಎಂದವನಿಗೆ ಹುಚ್ಚ ಎಂದಿರಿ.ಅವನನ್ನು ಕೊಂದಿರಿ, ಮಾನವನ್ನು ಪ್ರಿತಿಸು ಎಂದ ಏಸುವನ್ನು ಸಿಲುಬೆಗೆ ಎರಿಸಿದಿರಿ.ಮಾನವನನ್ನು ಮಾನವ ನನ್ನಾಗಿ ಕಾಣು ಎಂದಾಗ ಬಸವಣ್ಣನವರನ್ನು ಕೊಂದಿರಿ. ನ್ಯಾಯ,ಸತ್ಯ, ಧರ್ಮ ರಕ್ಷಣೆಗಾಗಿ ರಚಿಸಿದ ವಚನ ಸಾಹಿತ್ಯದ ಜನಕರನ್ನು ಕೊಂದಿರಿ. ಪರಸ್ಪರ ಪ್ರೆಮಿಸಿ ಕೈ ಹಿಡಿದ ಯುವ ದಂಪತಿಗಳನ್ನು ಕೊಂದಿರಿ. ದೇವರು ಕಲ್ಲಿನಲ್ಲಿ ಇಲ್ಲ ನಿಮ್ಮ ಹೃದಯದಲ್ಲಿದ್ದಾನೆ ಎಂದು ಎಚ್ಚರಿಸಿದ ಶರಣರನ್ನು ಆನೆಯ ಕಾಲಡಿಯಲ್ಲಿ ತುಳಿಸಿದಿರಿ. ಧರ್ಮದ ತಿರುಳನ್ನು ಚರ್ಚಿಸಲು ಕಟ್ಟಿದ ಅನುಭವ ಮಂಟಪದ ಸದಸ್ಯರನ್ನು ಕೊಂದಿರಿ.ಆದರೆ ಅರ್ಥ ಮಾಡಿಕೊಳ್ಳಿ ಅಂದು ಕೊಲ್ಲಲ್ಪಟ್ಟವರು ಇನ್ನೂ ಬದುಕಿದ್ದಾರೆ. ಅವರು ಇಂದೂ ಪೂಜಿಸಲ್ಪುಡುತ್ತಿದ್ದಾರೆ. ಅವರನ್ನು ಕೊಂದವರು ಅಂದೆ ಸತ್ತಿದ್ದಾರೆ,
ಅಂದು ಕೊಂದವರನ್ನು ಇಂದು ನೀವೇ ದೇವರೆಂದು ಪೂಜಿಸುತ್ತಿದ್ದಿರಿ. ಅವರ ಹೆಸರಿನಲ್ಲಿ ಗುಡಿ ಗುಂಡಾರ ಕಟ್ಟಿ ನಿಮ್ಮ ಹೊಟ್ಟೆ ಹೊರೆಯುತ್ತಿದ್ದೀರಿ. ಅಲ್ಲಿಯೂ ನಿಮ್ಮ ಮಂತ್ರ ತಂತ್ರ ಪ್ರಯೋಗಿಸುತ್ತಲಿದ್ದೀರಿ. ನಿಮಗೆ ಅನ್ನ ಇಕ್ಕಿದ,ನೀವೇ ನಿತ್ಯವೂ ಪೂಜಿಸುವ ನಿಮ್ಮ ದೇವರ ಸಿದ್ಧಾಂತಕ್ಕೆ ಕನ್ನ ಹಾಕಿ ಮತೊಮ್ಮೆ ನೀವೇ ಹುಟ್ಟಾಕಿದ ದೇವರನ್ನು ದಿನವೂ ಸಾಯಿಸಲು ಪ್ರಯತ್ನಿಸುತ್ತಿದ್ದಿರಿ. ಇದು ಯಾವ ಧರ್ಮ.
ಕೊಲ್ಲಿರಿ ಎಷ್ಟು ಜನರನ್ನು ಕೊಲ್ಲುತ್ತಿರಿ. ಕೊಂದಷ್ಟು ನಿಮ್ಮ ಧರ್ಮ ಕುಗ್ಗುತ್ತದೆ. ಒಬ್ಬ ಏಸುವನ್ನು ಕೊಂದು ಅರ್ಧ ಜಗತ್ತನ್ನು ಅವನಿಗೆ ಅರ್ಪಿಸಿದಿರಿ. ಒಬ್ಬ ಪೈಗಂಬರನನ್ನು ಕೊಂದು ಕಾಲು ಭಾಗ ಮತ್ತೆ ಕಳದು ಕೊಂಡಿರಿ.ಒಬ್ಬ ಬಸವಣ್ಣನನ್ನು ಕೊಂದು ಇಡೀ ದಕ್ಷಿಣ ಭಾರತವನ್ನು ಕಳೆದುಕೊಂಡಿರಿ.
ಅದು ಅಂದು,ಅಂದು ಮಾಡಿದ ತಪ್ಪನ್ನು ಇಂದೂ ಮಾಡಿದರೆ ನಿಮ್ಮನ್ನು ಮುರ್ಖಎನ್ನುತ್ತಾರೆ. ಇತಿಹಾಸ ಅರಿಯದ ಮೂಢ ವರ್ತಮಾನ ಕಟ್ಟಲಾರ. ಒಬ್ಬ ಕಲಬುರ್ಗೀಯನ್ನು ಕೊಂದು ಸಾವಿರಾರು ಕಲಬುರ್ಗಿಗಳನ್ನು ಹುಟ್ಟು ಹಾಕಿದಿರಿ, ಒಬ್ಬ ದಾಬೋಲ್ಕರರನನ್ನು ಕೊಂದು ಮಹಾರಾಷ್ಟ್ರ ಕಳೆದುಕೊಂಡಿರಿ. ಒಬ್ಬ ಗೌರಿಯನ್ನು ಕೊಂದು ಸಾವಿರಾರು ಗೌರಿಗಳನ್ನು ಸೃಷ್ಟಿಸಿದಿರಿ. ಇನ್ನು ನೀವು ಬುದ್ದಿ ಬಂದಿಲ್ಲವೆಂದರೆ ನಿಮ್ಮನ್ನಾರು ಕಾಪಾಡಲಾರರು.
ದೇವರು ದೇವರಲ್ಲ ಅದು ಕಲ್ಲೆಂದು ನೀರೂಪಿಸಿದೆ ಕಣ್ಣಿಗೆ ಕಾಣದ ವೈರಸ್. ಇಂದು ಮನುಕುಲಕ್ಕೆ ಸವಾಲಾಗಿದೆ.ಎಲ್ಲರನ್ನು ರಕ್ಷಿಸುವ ನಿಮ್ಮ ದೇವರು ಎಲ್ಲಿದ್ದಾನೆ.ನೀವು ಹೇಳುವ ಜಗದ್ ರಕ್ಷಕ ತನ್ನ ಸ್ವರಕ್ಷಣೆಗೆ ಬಾಗಿಲ ಹಿಂದೆ ಅಡಗಿ ಕುಳಿತ್ತಿದ್ದಾನೆ, ತನ್ನ ಭವಿಷ್ಯವನ್ನೆ ಅರಿಯದ ಒಬ್ಬ ಅಬ್ಬೆಪಾಲಿ ಅನ್ಯರ ನಾಳಿನ ಭವಿಷ್ಯ ಹೇಗೆ ಹೇಳಿಯಾನು?.ಒಂದು ಕ್ಷುಲ್ಲಕ ವೈರಸಗೇಕೆ ಅಡಗಿ ಮನೆಯಲ್ಲಿ ಕುಳಿತಿರುವ.
ಅಭಿವ್ಯಕ್ತಿ ಸ್ವಾತಂತ್ರ್ಯ ಇರುವ ದೇಶದಲ್ಲಿ ತಾಲಿಬಾನ ಸಂಸ್ಕೃತಿ ಯನ್ನು ತರಬಯಸುವ ನೀವೂ ತಾಲಿಬಾನಿಗಳ ಅಂತ್ಯ ಕಂಡಿಲ್ಲವೇ?. ನಿಮಗೆ ಸಲ್ಲದ ಅಭಿಪ್ರಾಯಗಳಿಗೆ ವೈಚಾರಿಕವಾಗಿ ಉತ್ತರಿಸಿ,ಅದನ್ನು ಬಿಟ್ಟು ದೈಹಿಕ ಬೆದರಿಕೆ ಹಾಕುವದು ಅತ್ಯಂತ ಹೇಯ ಹಾಗು ಖಂಡನೀಯ.
ಲಿಂಗಾಯತರ ತಂಟೆಗೆ ಬರಬೇಡಿ, ಬಸವಣ್ಣನ ಭಕ್ತರು ಶಾಂತಿ ಪ್ರಿಯರು ಆದರೆ ಹೇಡಿಗಳಲ್ಲ. ನಮ್ಮಲಿಯ ಗಣಾಚಾರಿ ಅಂಬಿಗರ ಚೌಡಯ್ಯ ಇನ್ನೂ ಸತ್ತಿಲ್ಲ.ಅವನು ನಮ್ಮ ಮನೆ ಮನೆಯಲ್ಲಿ ಇರುವುದನ್ನು ಜ್ಞಾಪಿಸಿಕೊಳ್ಳಿ. ಎಚ್ಚರಿಕೆ
ನಿಮ್ಮ ಅನಾಗರಿಕತೆಯ ಅತಿರೇಖದ,ಅರ್ಥವಿಲ್ಲದ ವೈದಿಕ ಆಚರಣೆ ,ಮುಡನಂಬಿಕೆ,ಕಂದಾಚಾರಗಳನ್ನು ವಿರೋಧಿಸುವದು ಆರೋಗ್ಯಕರ ಸಮಾಜವನ್ನು ಬಯಸುವ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಇಂದು ನೀವೂ ಬೆದರಿಕೆ ಹಾಕುತ್ತಿರುವದು ಒಬ್ಬ ಲಿಂಗಾಯತ ಸನ್ಯಾಸಿಗಲ್ಲ ಒಂದು ಸಮಾಜಕ್ಕೆ ನೆನಪಿರಲಿ. ಶ್ರೀ ನಿಜಗುಣಾನಂದ ಶರಣರು ಒಬ್ಬ ವ್ಯಕ್ತಿಯಲ್ಲ ಅವರು ಲಿಂಗಾಯತ ಧರ್ಮದ ಶಕ್ತಿ. ಅವರಿಗೆ ಬೆದರಿಕೆ ಸಮಾಜಕ್ಕೆ ಬೆದರಿಕೆ.
ಆಯುಷ್ಯ ತೀರಿದಲ್ಲದೆ ಮರಣವಿಲ್ಲ,
ಭಾಷೇ ತಪ್ಪಿದಲ್ಲದೆ ದಾರಿದ್ರವಿಲ್ಲ.
ಅಂಜಲದೇಕೋ, ಲೋಕವಿಗರ್ಭಣೆಗೆ?
ಅಂಜಲದೇಕೋ, ಕೂಡಲಸಂಗಮದೇವಾ ನಿಮ್ಮಾಳಾಗಿ.