ಧಾರವಾಡ: ಆ ವರ್ಷ ಜಗತ್ತಿನ ಆರ್ಥಿಕ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಇಡೀ ಜಗತ್ತು ಆರ್ಥಿಕವಾಗಿ ನೂಜ್ಜು ಗುಜ್ಜಾಗಿತ್ತು. ಅದು 1929ರ ವರ್ಷ..ಇದರ ಬಿಸಿ ಭಾರತಕ್ಕೂ ತಟ್ಟಿತ್ತು.ಆಗ ಬ್ರಿಟಿಷ್ ಆಡಳಿತ ವಿತವ್ಯಯ ಸಾಧಿಸಲು ಹಿರಿಯ ICS ಅಧಿಕಾರ ಥಾಮಸ್ ನೇತ್ರತ್ವದಲ್ಲಿ ಮಿತವ್ಯಯ ಸಾಧಿಸುವ ಕುರಿತು ವರದಿ ನೀಡಲು ಮುಂಬೈ ಸರಕಾರ ಆದೇಶ ಮಾಡಿತ್ತು..
ಥಾಮಸ್ ಸಮಿತಿಯು ೧)ಮುಂಬೈ ಸರಕಾರದ ವಿಧಾನ ಪರಿಷತ್ ಸದಸ್ಯರ ಸಂಖ್ಯೆಯನ್ನು ನಾಲ್ಕಕ್ಕೆ ಇಳಿಸಲು ತಿಳಿಸಿತು.೨) ಧಾರವಾಡ ದ ಕರ್ನಾಟಕ ಮಹಾವಿದ್ಯಾಲಯ, ಪುಣೆಯ ಕೃಷಿ ಮಹಾವಿದ್ಯಾಲಯ, ಮತ್ತು ಪುಣೆಯ ಡೆಕ್ಕನ್ ಕಾಲೇಜು ಮುಚ್ಚಬೇಕೆಂದು ಶಿಪಾರಸ್ಸು ಮಾಡಿತು.
ಶಿಫಾರಸ್ಸಾದ ಕಲವೇ ದಿನಗಳಲ್ಲಿ 1930 ರಲ್ಲಿ ಸಿದ್ದಪ್ಪ ಕಂಬಳಿಯವರು ಮುಂಬೈ ಸರಕಾರದಲ್ಲಿ ಮಂತ್ರಿಯಾದರು…ವಿಷಯವು ಸಂಪುಟದ ಮುಂದೆ ಬಂದಾಗ ಗವರ್ನರ್ ಎದುರು ಕಂಬಳಿಯವರು”ಕರ್ನಾಟಕ ಕಾಲೇಜ್ ಮುಚ್ಚುವುದಾದರೆ ಸರಕಾರ ನನ್ನ ರಾಜೀನಾಮೆ ಸ್ವೀಕರಿಸಬೇಕಾಗುತ್ತದೆ. ಕಾಲೇಜು ಮುಚ್ಚಲು ನಾನು ಮಂತ್ರಿಯಾಗಿ ಬರಲಿಲ್ಲ..ಜನ ಮಂತ್ರಿ ಪದವಿ ಉಳಿಸಿಕೊಂಡು ಕಾಲೇಜು ಸಮಾಧಿ ಮಾಡಿದ ಎಂದು ಕಲ್ಲು ಹೊಡೆಯುತ್ತಾರೆ. ಕರ್ನಾಟಕ ಕಾಲೇಜು ಸರಕಾರದ ಅನುದಾನದಿಂದ ಸ್ಥಾಪಿತವಾದುದಲ್ಲ.ಉತ್ತರ ಕರ್ನಾಟಕದ ರೈತಾಪಿ ಜನ ಬೇವರು ಸುರಿಸಿ ಸಂಪಾದಿಸಿದ ಹಣದಿಂದ ಕಟ್ಟಿದ್ದಾರೆ.ಅದು ಅರಟಾಳ ರುದ್ರಗೌಡರ ಸಂಘಟನೆಯ ಫಲಶ್ರುತಿ ಎಂದು ಗುಡುಗಿದರು..ಧಾರವಾಡದಿಂದ ಬಂದ ನಾನು ಇ ಕಾಲೇಜುನ್ನು ನನ್ನ ಕೈ ಯಾರ ಮುಚ್ವಬೇಕೆ?ಮುಂದುವರೆದು ಕೃಷಿ ಕುಟುಂಬದಿಂದ ಬಂದ ನಾನು ಪುಣೆಯ ಕೃಷಿ ಕಾಲೇಜು ಮುಚ್ಚಬೇಕೆ?ನನ್ನ ರಾಜೀನಾಮೆ ಪಡೆದು ಏನಾದರೂ ಮಾಡಿ ಎಂದು ಸಂಪುಟದಿಂದ ಹೊರನಡೆದರು…ಕಂಬಳಿಯವರ ಈ ನಡೆ ಧಾರವಾಡದ ಮತ್ತು ಪುಣೆಯ ಕಾಲೇಜಿನ ಭವಿಷ್ಯವನ್ನು ಎತ್ತಿ ಹಿಡಿಯಿತು..ಕರ್ನಾಟಕ ಕಾಲೇಜು ದ್ವೀತಿಯ ದರ್ಜೆಯಿಂದ ಪ್ರಥಮ ದರ್ಜೆಗೆ ಏರಿಸಿದರು.
ಹೇಗೆಂದರೆ ಥಾಮಸ್ ವರದಿಯ ಪ್ರಕಾರ ಪುಣೆಯ ಡೆಕ್ಕನ ಕಾಲೇಜು ಮುಚ್ಚಲು ನಿರ್ಧರಿಸಿತು ಸಂಪುಟ ಸಭೆ ಪುಣೆಯ ಕಾಲೇಜಿನ ಆಡಳಿತ ಮಂಡಳಿ ದೊಡ್ಡ ಗದ್ದಲವನ್ನೆ ಆರಂಭಿಸಿದರು..ಕಾರಣ ಆಡಳಿತ ಮಂಡಳಿಯ ಪ್ರಭಾವ ಪುಣೆಯಲ್ಲಿ ಜೋರಾಗಿತ್ತು .. ಮುಕುಂದರಾವ್ ಜಯಕರ ಎನ್ನುವರ ನೇತೃತ್ವದಲ್ಲಿ ಅರವತ್ತನಾಲ್ಕು ಜನ ಗವರ್ನರ್ ಕಾಣಲು ಬಂದರು..ಅಷ್ಟೂತ್ತಿಗೆ ಶಿಕ್ಷಣ ಮಂತ್ರಿಗಳಾದ ಸಿದ್ದಪ್ಪ ಕಂಬಳಿಯವರು ಬಂದರು…ನಿಮ್ಮ ಮಂತ್ರಿಗಳೆ ಬಂದಿದ್ದಾರೆ.ಅವರೂಂದಿಗೆ ಮಾತಾಡಿ ಎಂದು ಹೇಳಿ ಹೋಗಿಬಿಟ್ಟರು…ಆದರೆ ಕಂಬಳಿಯವರ ಮುಂದೆ ತಮ್ಮ ಆಟ ನಡೆಯಲಾರದು ಎಂದು ಅಲ್ಲಿಂದ ಅವರ ಆಪ್ತರಾದ ಛತ್ರಪತಿ ಶಾಹು ಮಾಹಾರಾಜರಿಂದ ಕಂಬಳಿಯವರ ಮೇಲೆ ಒತ್ತಡ ಹಾಕಲು ಯತ್ನಿಸಿದರು…ಇವರ ವಾದವೇನೆಂದರೆ ಧಾರವಾಡ ಕರ್ನಾಟಕ ಮಹಾವಿದ್ಯಾಲಯ ಮುಚ್ಚಿಸಿ ಡೆಕ್ಕನ ವಿದ್ಯಾಲಯ ಉಳಿಸಿಕೂಳ್ಳುವುದು..ಆದರೆ ಕಂಬಳಿಯವರು ಪುಣೆ ಶೈಕ್ಷಣಿಕ ವಾಗಿ ಮತ್ತು ಆರ್ಥಿಕ ವಾಗಿ ಬೆಳವಣಿಗೆ ಕಂಡಿದೆ..ಹಾಗಾಗಿ ಇಲ್ಲಿಯ ಕಾಲೇಜು ಮುಚ್ಚಿದರೆ ಹೆಚ್ಚಿನ ನಕಾರಾತ್ಮಕ ಪರಿಣಾಮ ಬೀರದು..
ಕರ್ನಾಟಕ ಮಹಾವಿದ್ಯಾಲಯ ಮುಚ್ಚಿದರೆ ಮುಂಬೈ ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಶಾಶ್ವತವಾಗಿ ಮುಚ್ವಿ ಹೋಗುವುದು.ಕಾರಣ ಆಗಿನ ಕಾಲಕ್ಕೆ ಮುಂಬಯಿ ಕರ್ನಾಟಕದ ಏಕಮೇವ ಕಾಲೇಜು ಆಗಿತ್ತು .ಇದನ್ನು ಕಂಬಳಿಯವರು ಶಾಹು ಮಹಾರಾಜರಿಗೆ ಅರಿಕೆ ಮಾಡಿದರು…ಆಗ ಶಾಹು ಮಹಾರಾಜರು ನೀವು ತೆಗೆದುಕೂಂಡ ನಿರ್ಧಾರಕ್ಕೆ ನನ್ನ ಬೆಂಬಲವಿದೆ ಎಂದರು…ಇವರ ಹತ್ತಿರ ಅಳಲು ತೋಡಿಕೊಳ್ಳಲು ಬಂದವರು “ಬಂದ ದಾರಿಗೆ ಸುಂಕವಿಲ್ಲ “ಎಂದು ಸಾಗಿದರು.ಮತ್ತು ಗರ್ವದಿಂದ ವರ್ತಿಸಲು ಕಾರಣವಾದ ತಮ್ಮ ಜನಾಂಗೀಯ ಶ್ರೇಷ್ಠತೆ ಕಂಬಳಿಯವರ ಮುಂದೆ ಮಣ್ಣು ತಿಂದಿತ್ತು…

ಡೆಕ್ಕನ್ ಕಾಲೇಜು ಮುಚ್ಚುವ ನಿರ್ಧಾರವಾದ ತಕ್ಷಣವೇ ಪ್ರಯೋಗಾಲಯ ಮತ್ತು ಗ್ರಂಥಾಲಯದ ಪಾಠೋಪಕರಣಗಳನ್ನು ಸೂರ್ಯ ಮೂಡುವ ಮುನ್ನ ಪುಣೆಯ ಜನರು ಎಚ್ಚರಗೂಳ್ಳುವ ಮುನ್ನ ಕಂಬಳಿಯವರು ಧಾರವಾಡಕ್ಕೆ ಟ್ರಕ್ಕಿನಲ್ಲಿ ತುಂಬಿ ಕಳುಹಿಸಿ ಬಿಟ್ಟಿದ್ದರು…ಆ ಮೂಲಕ ಗ್ರೇಡ್ -೨ ಕಾಲೇಜು ಗ್ರೇಡ್-೧ ಕಾಲೇಜಾಗಿ ಮಾರ್ಪಟ್ಟಿತು.. ಅದರ ಹಿಂದಿನ ಪ್ರೇರಕ ಮತ್ತು ಮಾಂತ್ರಿಕ ಶಕ್ತಿ ಸರ್ ಸಿದ್ದಪ್ಪ ಕಂಬಳಿಯವರು…
ಆದರೆ ಇದು ಆ ಮಹಾವಿದ್ಯಾಲಯ ದಲ್ಲಿ ಓದಿದ ಮತ್ತು ಕಾರ್ಯನಿರ್ವಹಿಸಿದ ಸಿಬ್ಬಂದಿಗೆ ಗೊತ್ತಿರದೇ ಇರುವುದು ಖೇದಕರ ವಿಷಯ…ಹಾಗಾಗಿ ಉತ್ತರ ಕರ್ನಾಟಕದಲ್ಲಿ ಉನ್ನತ ಶಿಕ್ಷಣಕ್ಕೆ ಅಡಿಪಾಯ ಹಾಕಿದ ಮೇರು ವ್ಯಕ್ತಿಗಳ ಸಾಲಿನಲ್ಲಿ ಇವರೇ ಪ್ರಥಮರು ಮತ್ತು ಸದಾ ಸ್ಮರಣೀಯರು…
ಲೇಖಕರು : ಮಹೇಶ ಚನ್ನಂಗಿ KES
ಚನ್ನಮ್ಮನ ಕಿತ್ತೂರ
Very nice informative article.So many people benefited immensely by KCD are not aware of this . Thanks to the author
ಶರಣು ಶರಣಾರ್ಥಿಗಳು