ಲಿಂಗಾಯತ ಕ್ರಾಂತಿ: ಲಿಂಗಾಯತರ ಪ್ರಶ್ನಾತೀತ ನಾಯಕ, ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿಗಳು, ನೇರ ನಡೆ-ನುಡಿಯ ಲಿಂಗಾಯತ ಕ್ರಾಂತಿ ಪತ್ರಿಕೆಯ ಮಾರ್ಗದರ್ಶಕರಾದ ಸನ್ಮಾನ್ಯಶ್ರೀ ಡಾ. ಎಂ.ಬಿ.ಪಾಟೀಲ(ಮಲ್ಲನಗೌಡ ಬಸನಗೌಡ ಪಾಟೀಲ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಶ್ರೀಯುತರಿಗೆ ಸೃಷ್ಟಿಕರ್ತ ಪರಮಾತ್ಮನ ಆಶೀರ್ವಾದ ಧರ್ಮಗುರು ಬಸವಣ್ಣನವರ, ಬಸವಾದಿ ಶರಣರ, ಸಂತರ, ಮಹಾಂತರ ಮಾರ್ಗದರ್ಶನ ಸದಾಕಾಲವೂ ಇರಲೇಂದು ಕರ್ನಾಟಕದ ಸಮಸ್ತ ಜನತೆಯ ಪರವಾಗಿ ಬೇಡಿಕೊಳ್ಳುತ್ತೇವೆ. ಸನ್ಮಾನ್ಯಶ್ರೀ ಡಾ. ಎಂ.ಬಿ.ಪಾಟೀಲ(ಮಲ್ಲನಗೌಡ ಬಸನಗೌಡ ಪಾಟೀಲ)ರು ಬಬಲೇಶ್ವರ ವಿಧಾನ ಸಭಾ ಕ್ಷೇತ್ರದ …
Read More »ಬಸವಣ್ಣ ದಕ್ಷಿಣ ಭಾರತದ ಪರ್ಯಾಯ ಬುದ್ದ
ಲಿಂಗಾಯತ ಕ್ರಾಂತಿ: ಎಂ.ಎಂ.ಕಲ್ಬುರ್ಗೀ ಸರ್ ಬರೆದಂತ ಬಸವಣ್ಣ ದಕ್ಷಿಣ ಭಾರತದ ಪರ್ಯಾಯ ಬುದ್ದ ಎನ್ನುವ ಶೀರ್ಷಿಕೆಯನ್ನು ಇಲ್ಲಿ ಬಳಸುತ್ತಿರುವೆ.ಕಲ್ಬುರ್ಗಿ ಸರ್ ಬರೆದಂತೆ “ಧಾರ್ಮಿಕ ಆಯಾಮ ಕಾರಣವಾಗಿ ಬಸವಣ್ಣ ಬುದ್ಧನಿಗೆ ಹತ್ತಿರವೆನಿಸುತ್ತಾನೆ. ಕಾಲದ್ರಷ್ಠಿಯಿಂದ ಇವರಿಬ್ಬರಗೂ ಒಂದೂವರೆ ಸಾವಿರ ವರ್ಷಗಳ ಅಂತರ . ಪ್ರಾದೇಶಿಕವಾಗಿ ಒಬ್ಬನದು ಉತ್ತರ ಭಾರತ ಇನ್ನೊಬ್ಬನದು ದಕ್ಷಿಣ ಭಾರತ.ಹೀಗಾಗಿ ಕಾಲ -ದೇಶ ದ್ರಷ್ಠಿಯಿಂದ ಒಬ್ಬರಿಗೊಬ್ಬರು ಸಂಬಂಧವಿಲ್ಲ , ಆದರೆ ಇವರ ನಿಲುವುಗಳಲ್ಲಿ ಬಹುಪಾಲು ಹೋಲಿಕೆ ಕೇವಲ ಆಕಸ್ಮಿಕವೆಂದೂ ಅಲ್ಲ …
Read More »ಕರ್ನಾಟಕದ ಏಕೀಕರಣಕ್ಕೆ ಮರಾಠಿ ಹೆಣ್ಣುಮಗಳು
ಲಿಂಗಾಯತ ಕ್ರಾಂತಿ: ನವೆಂಬರ್ ಒಂದು ಕರ್ನಾಟಕ ರಾಜ್ಯೋತ್ಸವ,ಹರಿದು ಹಂಚಿಹೊಗಿದ್ದ ಕನ್ನಡಿಗರನ್ನೆಲ್ಲ ಒಂದು ಗುಡಿಸಿದ ದಿನ (1956). ಕರ್ನಾಟಕದ ಏಕೀಕರಣದ ಹಿಂದಿನ ರೋಚಕ ಕಥೆ, ಅದರ ಇತಿಹಾಸ,ಅದನ್ನು ಸಾಕಾರಗೊಳಿಸಿದ ಹಿರಿಯರ ತ್ಯಾಗ, ಬಲಿದಾನ ಇಂದು ನೆನೇಯಲೇ ಬೇಕು. ಅದು ನಮ್ಮ ಕರ್ತವ್ಯ. 1947 ಭಾರತ ಸ್ವಾತಂತ್ರ್ಯಗಳಿಸುವ ಉಮೇದಿನಲ್ಲಿತ್ತು. ಅದರೊಂದಿಗೆ ಭಾರತದಲ್ಲಿದ್ದ 562 ರಾಜರ ರಾಜ್ಯ ಗಳನ್ನು ಸ್ವತಂತ್ರ ಭಾರತದಲ್ಲಿ ವೀಲಿನ ಗೊಳಿಸಿ, ಅವುಗಳ ಸ್ಥಳದಲ್ಲಿ ವಿಶಾಲ ಭಾರತವನ್ನು ಸ್ಥಾಪಿಸಿ,ಭಾಷಾವಾರು ಪ್ರಾಂತಗಳನ್ನಾಗಿ …
Read More »ಆಳವಿಲ್ಲದ ಸ್ನೇಹಕ್ಕೆ “ಮರಣವೆ ಮಹಾನವಮಿ”
ಬಸವಣ್ಣ ಹಾಗೂ ಸಮಕಾಲೀನ ಶರಣರ ಕಾಲದಲ್ಲಿ ಹುಟ್ಟು ಪಡೆದ ಸಾಹಿತ್ಯದ ಕಾಲ ಹನ್ನೆರಡನೆ ಶತಮಾನ. ಸುಮಾರು 900 ವರ್ಷಗಳ ಸುದೀರ್ಘ ಅವಧಿಯ ಇಂದಿನ ದಿನಗಳಲ್ಲಿ ಇದರ ಸಿದ್ಧಾಂತ, ಆಚರಣೆಗಳು ಜನಜೀವನದಲ್ಲಿ ಜೀವಂತವಾಗಿ ಉಳಿದಿಕೊಂಡಿದೆ. ಶರಣರ ವಚನ ಸಾಹಿತ್ಯ ಕನ್ನಡಿಗರ ಅಸ್ಮಿತೆಯ ಜಾಗೃತಿ ಮೂಡಿಸುತ್ತದೆ. ಪೂರ್ವಗ್ರಹ ಪೀಡಿತರಿಗೆ ಇದು ವೈದಿಕ ವಿರೋಧಿ ಸಿದ್ಧಾಂತ ಅಲ್ಲ ಎಂದು ಎನಿಸುತ್ತದೆ. ಆದರೆ ವಚನ ಸಾಹಿತ್ಯ ಅವೈದಿಕ ನಿಲುವು ಪ್ರತಿಪಾದಿಸುತ್ತದೆ; ಇದು ವೈದಿಕ ವಿರೋಧಿ …
Read More »ಶರಣ ಪರಂಪರೆಯ ಶರಣ ಶರಣೆಯರು- ಗಂಗಮ್ಮ
ಲಿಂಗಾಯತ ಕ್ರಾಂತಿ ವರದಿ: 12 ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಕಲ್ಯಾಣದಲ್ಲಿ ಜನರ ಸಾಮಾಜಿಕ ಬದುಕು ಕಲ್ಯಾಣವಾಗುವಂತೆ ಒಂದು ಕ್ರಾಂತಿಯನ್ನೇ ನಡೆಸಿ ಇಂದಿಗೂ, ಮುಂದಿಗೂ ಅಜರಾಮರರಾದರು. ಆಗಿನ ಕಾಲದಲ್ಲಿಯೇ ಸಾಮಾಜಿಕವಾಗಿ ಎಲ್ಲರೂ ಒಂದೇ ಎನ್ನುವ ತತ್ವವನ್ನೂ, ಆರ್ಥಿಕ ಸಬಲತೆಗೆ ದಾಸೋಹದ ಪರಿಕಲ್ಪನೆಯನ್ನೂ, ಆಧ್ಯಾತ್ಮಿಕ ಬಲಕ್ಕಾಗಿ ಅರಿವಿನ ಮಹಾ ಮಂತ್ರವನ್ನೂ ಅವರು ಜಾರಿಗೊಳಿಸಿ, ಜನ ಸಾಮಾನ್ಯರಲ್ಲಿ ಹುಟ್ಟಿನಿಂದ ಯಾರೂ ದೊಡ್ಡವರೂ ಅಲ್ಲ, ಕೀಳು ಅಲ್ಲ ಎಂದು ಸಮಾನತೆಯನ್ನು ಸಾರುವ …
Read More »ದಕ್ಷಿಣ ಭಾರತದ ವೃಚಾರಿಕ ಸಂತ ಪೆರಿಯಾರ್ ಕುರಿತು
ಜನನ/ಜೀವನ: ಪೆರಿಯಾರ್ ಅಥವಾ ರಾಮಸ್ವಾಮಿ ಜನಿಸಿದ್ದು 1879ರ ಸೆಪ್ಟಂಬರ್ 17 ರಂದು. ಅಂದಿನ ಮದ್ರಾಸ್ ರಾಜ್ಯದ ಕೊಯಮತ್ತೂರು ಜಿಲ್ಲೆಯ ಈರೋಡಿನ ಶ್ರೀಮಂತ ಬಲಿಜ ಕುಟುಂಬದಲ್ಲಿ ಹುಟ್ಟಿದ ರಾಮಸ್ವಾಮಿಯವರ ಮನೆಯ ಭಾಷೆ ಕನ್ನಡವಾಗಿತ್ತು. ತಂದೆ ವೆಂಕಟಪ್ಪ ನಾಯಕರ್ , ತಾಯಿ ಚಿನ್ನತಾಯಮ್ಮ. ಕೇವಲ 5 ವರ್ಷಗಳ ಕಾಲ ವಿದ್ಯಾಭ್ಯಾಸ ನಡೆಸಿದ ರಾಮಸ್ವಾಮಿ ತನ್ನ 12ನೇ ವಯಸ್ಸಿನಲ್ಲೇ ತಂದೆ ನಡೆಸುತ್ತಿದ್ದ ವ್ಯಾಪಾರಕ್ಕೆ ನೆರವಾಗತೊಡಗಿದರು. ಪೆರಿಯಾರ್ ಅಥವ ರಾಮಸ್ವಾಮಿಗೆ 19 ವರ್ಷದವರಾಗಿದ್ದಾಗ ಮದುವೆಯಾಯಿತು, …
Read More »