“ಕುಲಹೀನ ಶಿಷ್ಯಂಗೆ ಅನುಗ್ರಹವ ಮಾಡಿ, ತಿರುಗಿ ಅವನ ಮನೆಯಲ್ಲಿ ಉಣ್ಣಬಾರದೆಂದು ಅಕ್ಕಿ ಕಣಕವ ಕೊಂಡುಹೋಗುವ ಗುರುವಿನ ಕಂಡರೆ, ಕೆಡವಿ ಹಾಕಿ ಮೂಗನೆ ಕೊಯ್ಧು ಇಟ್ಟಂಗಿಯ ಕಲ್ಲಿಲೆ ತಿಕ್ಕಿ ಸಾಸಿವೆಯ ಹಿಟ್ಟನೆ ತಳಿದು ಮೇಲೆ ಲಿಂಬಿಯ ಹುಳಿಯನೆ ಹಿಂಡಿ ಪಡುವ ಗಾಳಿಗೆ ಹಿಡಿಯೆಂದಾತ ನಮ್ಮ ಅಂಬಿಗರ ಚೌಡಯ್ಯ” ನಿಜ ಶರಣ ಅಂಬಿಗರ ಚೌಡಯ್ಯನವರು 12ನೇ ಶತಮಾನದ ಬಸವಣ್ಣನವರ ಸಮಕಾಲೀನ …
Read More »ಅಕ್ಕನ ಸಮರ್ಪಣಾ ಭಾವ
ಭಾರತೀಯ ಭಕ್ತಿ ಸಾಹಿತ್ಯದ ಚರಿತ್ರೆಯಲ್ಲಿ ಅಕ್ಕಮಹಾದೇವಿ ಒಬ್ಬ ವಿಶಿಷ್ಟ ಸಾಧಕಿ, ಯೋಗಿಣಿಯಾಗಿ ಕಂಡುಬರುತ್ತಾಳೆ. ಆಕೆಯ ಪ್ರೀತಿ ಪ್ರೇಮ ವಿನೂತನ ವಿಸ್ಮಯದ ಅಧ್ಯಾತ್ಮದ ಬದುಕು. ಕನಸು ಕನವರಿಕೆಯ ಧ್ಯಾನಸ್ಥ ಮನದಲ್ಲಿ ಚೆನ್ನಮಲ್ಲಿಕಾರ್ಜುನನನ್ನು ಸ್ಮರಿಸಿಕೊಳ್ಳುವ ಆದರ್ಶ ಮಾರ್ಗ. ವಚನಗಳಲ್ಲಿ ಕಂಡುಬರುವ ಸೃಜನಶೀಲ ಹಾಗೂ ವೈಚಾರಿಕ ಸನ್ನಿವೇಶಗಳೊಂದಿಗೆ ಅನ್ವೇಷಿಸುವ ಮನಸ್ಥಿತಿ ಆಕೆಯದು. ಹೀಗಾಗಿ ಅಕ್ಕನ ವಚನಗಳನ್ನು ಒಂದು ಸೀಮಿತ ವಲಯದಲ್ಲಿ ಚರ್ಚಿಸಲು ಸಾಧ್ಯವಿಲ್ಲ. ಲೌಕಿಕ ಪ್ರೀತಿಯ ಮೂಲಕ ಆಧ್ಯಾತ್ಮಿಕ ಮಾರ್ಗದ ಅನ್ವೇಷಣೆಯಲ್ಲಿ ಒಂದಾಗಿದೆ. ಭಾರತೀಯ …
Read More »ಗಣಾಚಾರಿ ಲಿಂಗಾಯತ ನಿಜಶರಣ ಅಂಬಿಗರ ಚೌಡಯ್ಯ
ಉಚ್ಚೆಯ ಬಚ್ಚಲಲ್ಲಿ ಬಂದವರೆಲ್ಲಾ , ನಾ ಹೆಚ್ಚು, ನೀ ಹೆಚ್ಚು ಎಂಬುವರು. ಇಂತಿವರನ್ನು ಹಿತ್ತಲಿನ ಬಚ್ಚಲಿಗೊಯ್ದು ಮಚ್ಚಿ-ಮಚ್ಚಿಲೇ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣ. ಜಾತಿ ತಾರತಮ್ಯ ವಿಚಾರವಾಗಿ ಈ ಮಟ್ಟದಲ್ಲಿ ಅತ್ಯಂತ ಕಟುವಾಗಿ ವಿಮರ್ಷಣೆ ಮಾಡುವ ಅಂಬಿಗರ ಚೌಡಯ್ಯ ನವರು ಕ್ರಿ.ಶ. ೧೨ ನೇ ಶತಮಾನದ ಕಾಲಮಾನದವರು. ಇವರು ಈಗಿನ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚೌಡದಾನಪುರ (ಶಿವಪುರ) ಎಂಬ ಗ್ರಾಮದವರು. ಹಾಗೂ ಕೆಲವು ಸಂಶೋಧನೆಗಳ ಪ್ರಕಾರ …
Read More »ಶರಣ ಪರಂಪರೆಯ ಶರಣ ಶರಣೆಯರು- ಗಂಗಮ್ಮ
ಲಿಂಗಾಯತ ಕ್ರಾಂತಿ ವರದಿ: 12 ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಕಲ್ಯಾಣದಲ್ಲಿ ಜನರ ಸಾಮಾಜಿಕ ಬದುಕು ಕಲ್ಯಾಣವಾಗುವಂತೆ ಒಂದು ಕ್ರಾಂತಿಯನ್ನೇ ನಡೆಸಿ ಇಂದಿಗೂ, ಮುಂದಿಗೂ ಅಜರಾಮರರಾದರು. ಆಗಿನ ಕಾಲದಲ್ಲಿಯೇ ಸಾಮಾಜಿಕವಾಗಿ ಎಲ್ಲರೂ ಒಂದೇ ಎನ್ನುವ ತತ್ವವನ್ನೂ, ಆರ್ಥಿಕ ಸಬಲತೆಗೆ ದಾಸೋಹದ ಪರಿಕಲ್ಪನೆಯನ್ನೂ, ಆಧ್ಯಾತ್ಮಿಕ ಬಲಕ್ಕಾಗಿ ಅರಿವಿನ ಮಹಾ ಮಂತ್ರವನ್ನೂ ಅವರು ಜಾರಿಗೊಳಿಸಿ, ಜನ ಸಾಮಾನ್ಯರಲ್ಲಿ ಹುಟ್ಟಿನಿಂದ ಯಾರೂ ದೊಡ್ಡವರೂ ಅಲ್ಲ, ಕೀಳು ಅಲ್ಲ ಎಂದು ಸಮಾನತೆಯನ್ನು ಸಾರುವ …
Read More »ಹೂಗಾರ ಮಾದಯ್ಯನವರ ಜಯಂತಿ ಆಚರಣೆ
ಲಿಂಗಾಯತ ಕ್ರಾಂತಿ ವರದಿ: ಬಸವಾದಿ ಪ್ರಮಥರಲ್ಲೊಬ್ಬರಾದ ಹೂಗಾರ ಮಾದಯ್ಯ(ಮಾದಣ್ಣ)ನವರ ಜಯಂತಿಯನ್ನು ಸೆ. 02 ರಂದು ಗಜೇಂದ್ರಗಡದ ಮೈಸೂರು ಮಠದಲ್ಲಿ ಆಚರಿಸಲಾಯಿತು. ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಅಖಿಲ ಕರ್ನಾಟಕ ಹೂಗಾರ ಸಮಾಜ ಗಜೇಂದ್ರಗಡ ತಾಲೂಕ ಸಮಿತಿಗಳ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ, ಹೂಗಾರ ಸಮಾಜದ ತಾಲೂಕಾ ಅಧ್ಯಕ್ಷ, ತಾ.ಪಂ.ಉಪಾಧ್ಯಕ್ಷ ಶಶಿಧರ ಹೂಗಾರ, ಜೆ.ಎಲ್.ಎಂ.ಮುಖಂಡರುಗಳಾದ ರವೀಂದ್ರ ಹೊನವಾಡ,ಬಸವರಾಜ ಶೀಲವಂತರ,ಎಂ.ಎಸ್.ಹಡಪದ,ಮಂಜುನಾಥ ಹೂಗಾರ,ಕೆ.ಎಸ್.ಸಾಲಿಮಠ ಅವರುಗಳು ಶರಣ ಮಾದಯ್ಯನವರ ಜೀವನ ಹಾಗೂ ಲಿಂಗಾಯತ ಧರ್ಮಕ್ಕೆ ಅವರು ನೀಡಿದ …
Read More »ತಲೆಯೆರಡರ ಪಕ್ಷಿ ವಿಷ ನಿರ್ವಿಷವ ಮೆಲಿದಂತಾಯಿತ್ತೆನಗಯ್ಯಾ
ವಚನ ವಿಶ್ಲೇಷಣೆ: ಕಾಯದ ಕಣ್ದೆರೆಯಿಂದುದಯವಾದ ಧಾವತಿ ಎರಡು ನೋಡಯ್ಯಾ : ಅಯ್ಯಾ ಭ್ರಾಂತಿಯತ್ತಲೊಂದೆಳವುತ್ತಲದೆ ದೇವಾ ನಿಮ್ಮತ್ತಲೊಂದೆಳವುತ್ತಲದೆ. ಒಂದರ ಸಹಜವನೊಂದು ಗೆಲಲರಿಯದು. ಮುಂದೆ ಸತ್ಪಥಕ್ಕೆಂತಡಿಯಿಡುವೆನಯ್ಯಾ ನಾನು? ಬೆಳಗಾವಿ : ಕಾಲಚಕ್ರದಲ್ಲಿ ಹುಟ್ಟಿ, ಕರ್ಮಚಕ್ರದಲ್ಲಿ ಬೆಳೆದು ಕಲ್ಪಿತದಿಂದವೆ ದಿನಂಗಳು ಸವೆವುತ್ತವೆಯಯ್ಯಾ. ತಲೆಯೆರಡರ ಪಕ್ಷಿ ವಿಷ ನಿರ್ವಿಷವ ಮೆಲಿದಂತಾಯಿತ್ತೆನಗಯ್ಯಾ. ಅಂದಂದಿನರಿವು ಅಂದಂದಿನ ಮರವೆಗೆ ಸರಿಯಯ್ಯಾ. ತಂದೆ ಈ ದಂದುಗವ ಮಾಣಿಸಿ ನಿಮ್ಮ ನಿಜಾನಂದ ಭಕ್ತಿಯೆನಗೆ ಕರುಣಿಸಯ್ಯಾ ಅಮರಗುಂಡದ ಮಲ್ಲಿಕಾರ್ಜುನಾ. ಪುರದ ನಾಗಣ್ಣ ವಚನ ಅನುಸಂಧಾನ …
Read More »